ಸುಪ್ರೀಂ ಕೋರ್ಟ್ ಹಲವು ಬಾರಿ ವಿನಾಯಿತಿ ನೀಡಿದ್ದರೂ ಆದೇಶ ಪಾಲಿಸಲು ಸುಬ್ರತಾ ರಾಯ್ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ, ಬಾಕಿ ಉಳಿದಿರುವ ₹62,602.90 ಕೋಟಿಯನ್ನು ಪಾವತಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಬೇಕು. ಹಣ ಪಾವತಿಸದಿದ್ದರೆ 2015ರ ಜೂನ್ 15ರಂದು ನೀಡಿದ ಆದೇಶದ ಅನ್ವಯ ಸುಬ್ರತಾ ರಾಯ್ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಮತ್ತೊಮ್ಮೆ ನಿರ್ದೇಶನ ನೀಡಬೇಕು ಎಂದು ಸೆಬಿ ಕೋರಿದೆ.