‘ಈ ಸೂಚಿಕೆ ಪಡೆದ ಅನೇಕ ಉತ್ಪನ್ನಗಳನ್ನು ತಯಾರಿಸುವ ಕೌಶಲವನ್ನು ಆಯಾ ಪ್ರದೇಶದ ಜನರಿಗೆ ತಿಳಿಸುವುದೂ ಮುಖ್ಯವಾಗಿದೆ. ಉದಾಹರಣೆಗೆ ಉಡುಪಿ ಸೀರೆಗಳಿಗೆ ಭೌಗೋಳಿಕ ಸೂಚಿಕೆ ದೊರೆತಿದ್ದರೂ, ಕೌಶಲ ಬಲ್ಲವರು ಕಡಿಮೆ. ಮೊಳಕಾಲ್ಮುರು ಸೀರೆ, ಗುಳೇದಗುಡ್ಡದ ಬುಟ್ಟದಂಚುಸೀರೆ, ಕಿನ್ಹಾಳ ಕಲೆ ಮುಂತಾದ ಕಲಾಪ್ರಕಾರಗಳನ್ನು ಬೆಳೆಸಲು ತರಬೇತಿ ಮತ್ತು ಪ್ರೋತ್ಸಾಹ ಅಗತ್ಯ. ಕೃಷಿ ಕ್ಷೇತ್ರದಲ್ಲಿ ಉಡುಪಿ ಮಲ್ಲಿಗೆ, ಮಟ್ಟುಗುಳ್ಳ, ನಂಜನಗೂಡು ರಸಬಾಳೆ, ಕೊಡಗಿನ ಕಿತ್ತಳೆ ಸೇರಿದಂತೆ ಕೃಷಿ ಉತ್ಪನ್ನಗಳಿಗೆ ಪ್ರಮಾಣ ಪತ್ರಗಳನ್ನು ನೀಡುವ ನಿಟ್ಟಿನಲ್ಲಿಯೂ ಕೆಲಸಗಳು ಆಗಬೇಕಾಗಿವೆ’ ಎಂದು ಅವರು ತಿಳಿಸಿದರು.