ರಾಜಸ್ಥಾನ, ಚತ್ತೀಸಗಢ, ಜಾರ್ಖಂಡ, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳು ಒಪಿಎಸ್ ಜಾರಿಗೆ ತರುವುದಾಗಿ ಈಚೆಗೆ ಹೇಳಿವೆ. ‘ಅಲ್ಪಾವಧಿಯಲ್ಲಿ ಪಿಂಚಣಿಗೆ ರಾಜ್ಯ ಸರ್ಕಾರಗಳು ನೀಡಬೇಕಿರುವ ಮೊತ್ತ ಕಡಿಮೆ ಆಗುವುದು ಒಪಿಎಸ್ ಕಡೆ ಮುಖ ಮಾಡಲು ಕಾರಣವಾಗಿರಬಹುದು. ಆದರೆ ದೀರ್ಘಾವಧಿಯಲ್ಲಿ ಪಿಂಚಣಿಗಾಗಿ ನೀಡಬೇಕಿರುವ ಮೊತ್ತವು, ಈಗಿನ ಉಳಿತಾಯವನ್ನು ಮರೆಮಾಚುವಂತೆ ಇರುತ್ತದೆ’ ಎಂದು ಲೇಖನದಲ್ಲಿ ಹೇಳಲಾಗಿದೆ.