‘ಲಾಕ್ಡೌನ್ ಬಳಿಕ ಇದೀಗ ಹೊಸದಾಗಿ ಸಹಜ ಜೀವನ ಆರಂಭಿಸುತ್ತಿದ್ದು, ನವೋಲ್ಲಾಸದ ಆರಂಭಕ್ಕೆ ಸಜ್ಜಾಗಿದ್ದೇವೆ. ಈ ಸಂದರ್ಭದಲ್ಲಿ ತನಿಷ್ಕ್ ಎಲ್ಲರಿಗೂ ಶುಭ ಆರಂಭದ ಯಶಸ್ಸನ್ನು ಕೋರಲಿದೆ. ಹೊಸ ಸಾಧ್ಯತೆಗಳು ಭರವಸೆ ಮೂಡಿಸಲಿ. ನಾವು ಹೊಸ ಆರಂಭಕ್ಕಾಗಿ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡುತ್ತಿದ್ದೇವೆ’ ಎಂದು ಕಂಪನಿಯ ಜುವೆಲರಿ ವಿಭಾಗದ ಪ್ರಧಾನ ವ್ಯವಸ್ಥಾಪಕ ರಂಜನಿ ಕೃಷ್ಣಮೂರ್ತಿ ಹೇಳಿದ್ದಾರೆ.