ಫೆಬ್ರುವರಿ 28ರಂದು ನಡೆದ ಸಭೆಯಲ್ಲಿ ರಾಜ್ಯಕ್ಕೆ 99 ದಶಲಕ್ಷ ಕೆ.ಜಿ ತಂಬಾಕು ಬೆಳೆಗೆ ಅನುಮತಿ ನೀಡಲಾಗಿತ್ತು. ತಂಬಾಕನ್ನು ಹೆಚ್ಚಾಗಿ ಖರೀದಿಸುವ ಯೂರೋಪ್ ದೇಶಗಳು ಕೊರೊನಾ ವೈರಸ್ನಿಂದ ತತ್ತರಿಸಿವೆ. ಭವಿಷ್ಯದಲ್ಲಿ ರಾಜ್ಯದ ತಂಬಾಕು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಬಾರದು ಎಂಬ ದೃಷ್ಟಿಯಿಂದ 99 ದಶಲಕ್ಷ ಕೆ.ಜಿಯಿಂದ 88 ದಶಲಕ್ಷ ಕೆ.ಜಿಗೆ ಇಳಿಕೆ ಮಾಡಲಾಗಿದೆ. ಸಭೆಯಲ್ಲಿ ಮಂಡಳಿ ಅಧ್ಯಕ್ಷೆ ಕೆ.ಸುನಿತಾ, ಕಾರ್ಯಕಾರಣಿ ಮಂಡಳಿ ನಿರ್ದೇಶಕ ಎ.ಶ್ರೀಧರ್ ಬಾಬು ಹಾಜರಿದ್ದರು.