<p><strong>ನವದೆಹಲಿ:</strong> ಭಾರತದ ಅಸಂಘಟಿತ ದುಡಿಯುವ ವಲಯವು ಕೋವಿಡ್ ಸಾಂಕ್ರಾಮಿಕದ ಸಂಕಷ್ಟದಿಂದ ಹೊರಬರಲು ಅನುಕೂಲ ಕಲ್ಪಿಸಲು ₹ 3,716 ಕೋಟಿ ಸಾಲ ಮಂಜೂರು ಮಾಡಿರುವುದಾಗಿ ವಿಶ್ವ ಬ್ಯಾಂಕ್ ಬುಧವಾರ ಹೇಳಿದೆ.</p>.<p>ಸದ್ಯದ ಸಾಂಕ್ರಾಮಿಕದ ಪರಿಸ್ಥಿತಿ, ಭವಿಷ್ಯದ ವಿಪತ್ತುಗಳನ್ನು ನಿಭಾಯಿಸಲು ಈ ಸಾಲವು ರಾಜ್ಯಗಳಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡಲಿದೆ ಎಂದು ವಿಶ್ವ ಬ್ಯಾಂಕ್ ಪ್ರಕಟಣೆ ತಿಳಿಸಿದೆ.</p>.<p>ಒಟ್ಟಾರೆ ₹ 3,716 ಕೋಟಿ ಮೊತ್ತದಲ್ಲಿ ವಿಶ್ವ ಬ್ಯಾಂಕ್ನ ಅಂಗಸಂಸ್ಥೆಅಂತರರಾಷ್ಟ್ರೀಯ ಅಭಿವೃದ್ಧಿ ಸಂಘವು ₹ 836.10 ಕೋಟಿಯನ್ನು ಮತ್ತು ಅಂತರರಾಷ್ಟ್ರೀಯ ಪುನರ್ನಿರ್ಮಾಣ ಮತ್ತು ಅಭಿವೃದ್ಧಿ ಬ್ಯಾಂಕ್ (ಐಬಿಆರ್ಡಿ) ₹ 2,879.90 ಕೋಟಿಯನ್ನು ಸಾಲವಾಗಿ ನೀಡಲಿವೆ.</p>.<p>ಸಾಲವು 18.5 ವರ್ಷಗಳ ಮುಕ್ತಾಯ ಅವಧಿ (ಮೆಚ್ಯುರಿಟಿ ಪಿರಿಯಡ್) ಹೊಂದಿದ್ದು, ಐದು ವರ್ಷಗಳ ಹೆಚ್ಚುವರಿ ಅವಧಿಯನ್ನೂ ಒಳಗೊಂಡಿದೆ.</p>.<p>ಸಾಂಕ್ರಾಮಿಕವು ಆರಂಭವಾದಾಗಿನಿಂದಲೂ ಬಡ ಮತ್ತು ದುರ್ಬಲ ಕುಟುಂಬಗಳಿಗೆ ಸಹಾಯ ಮಾಡಲು ಭಾರತದ ಸಾಮಾಜಿಕ ಸಂರಕ್ಷಣಾ ಕಾರ್ಯಕ್ರಮಗಳನ್ನು ಬಲಪಡಿಸಲು ಒಟ್ಟಾರೆ ₹ 12,264.54 ಕೋಟಿ ಮೊತ್ತದ ನೆರವು ನೀಡಲಾಗಿದೆ ಎಂದು ಅದು ತಿಳಿಸಿದೆ.</p>.<p>ಬೀದಿ ಬದಿಯ ವ್ಯಾಪಾರಿಗಳು ಭಾರತದ ನಗರಗಳ ಅಸಂಘಟಿತ ಆರ್ಥಿಕತೆಯ ಭಾಗವಾಗಿದ್ದಾರೆ. ನ್ಯಾಷನಲ್ ಡಿಜಿಟಲ್ ಅರ್ಬನ್ ಮಿಷನ್ ಕಾರ್ಯಕ್ರಮವು ಬೀದಿ ಬದಿ ವ್ಯಾಪಾರಿಗಳಿಗೆ ಕೈಗೆಟುಕುವ ಬಡ್ಡಿ ದರಕ್ಕೆ ಗರಿಷ್ಠ ₹ 10 ಸಾವಿರದವರೆಗೆ ದುಡಿಯುವ ಬಂಡವಾಳದ ಸಾಲ ಒದಗಿಸಲಿದೆ. ನಗರ ಸ್ಥಳೀಯ ಸಂಸ್ಥೆಗಳು ಐ.ಟಿ. ಆಧಾರಿತ ವೇದಿಕೆಯ ಮೂಲಕ ಅವರನ್ನು ಗುರುತಿಸಲಾಗುತ್ತದೆ. ಹೊಸ ಸಾಲ ಕಾರ್ಯಕ್ರಮದಿಂದ ನಗರ ಪ್ರದೇಶಗಳ 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಪ್ರಯೋಜನ ಆಗಲಿದೆ ಎಂದು ಹೇಳಿದೆ.</p>.<p><strong>ಇದನ್ನೂ ಓದಿ... <a href="https://www.prajavani.net/business/commerce-news/gst-more-than-66-cr-returns-filed-in-4-years-says-finmin-843822.html" target="_blank">ಜಿಎಸ್ಟಿಗೆ ನಾಲ್ಕು ವರ್ಷ: 66 ಕೋಟಿಗೂ ಹೆಚ್ಚು ರಿಟರ್ನ್ಸ್ ಸಲ್ಲಿಕೆ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತದ ಅಸಂಘಟಿತ ದುಡಿಯುವ ವಲಯವು ಕೋವಿಡ್ ಸಾಂಕ್ರಾಮಿಕದ ಸಂಕಷ್ಟದಿಂದ ಹೊರಬರಲು ಅನುಕೂಲ ಕಲ್ಪಿಸಲು ₹ 3,716 ಕೋಟಿ ಸಾಲ ಮಂಜೂರು ಮಾಡಿರುವುದಾಗಿ ವಿಶ್ವ ಬ್ಯಾಂಕ್ ಬುಧವಾರ ಹೇಳಿದೆ.</p>.<p>ಸದ್ಯದ ಸಾಂಕ್ರಾಮಿಕದ ಪರಿಸ್ಥಿತಿ, ಭವಿಷ್ಯದ ವಿಪತ್ತುಗಳನ್ನು ನಿಭಾಯಿಸಲು ಈ ಸಾಲವು ರಾಜ್ಯಗಳಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡಲಿದೆ ಎಂದು ವಿಶ್ವ ಬ್ಯಾಂಕ್ ಪ್ರಕಟಣೆ ತಿಳಿಸಿದೆ.</p>.<p>ಒಟ್ಟಾರೆ ₹ 3,716 ಕೋಟಿ ಮೊತ್ತದಲ್ಲಿ ವಿಶ್ವ ಬ್ಯಾಂಕ್ನ ಅಂಗಸಂಸ್ಥೆಅಂತರರಾಷ್ಟ್ರೀಯ ಅಭಿವೃದ್ಧಿ ಸಂಘವು ₹ 836.10 ಕೋಟಿಯನ್ನು ಮತ್ತು ಅಂತರರಾಷ್ಟ್ರೀಯ ಪುನರ್ನಿರ್ಮಾಣ ಮತ್ತು ಅಭಿವೃದ್ಧಿ ಬ್ಯಾಂಕ್ (ಐಬಿಆರ್ಡಿ) ₹ 2,879.90 ಕೋಟಿಯನ್ನು ಸಾಲವಾಗಿ ನೀಡಲಿವೆ.</p>.<p>ಸಾಲವು 18.5 ವರ್ಷಗಳ ಮುಕ್ತಾಯ ಅವಧಿ (ಮೆಚ್ಯುರಿಟಿ ಪಿರಿಯಡ್) ಹೊಂದಿದ್ದು, ಐದು ವರ್ಷಗಳ ಹೆಚ್ಚುವರಿ ಅವಧಿಯನ್ನೂ ಒಳಗೊಂಡಿದೆ.</p>.<p>ಸಾಂಕ್ರಾಮಿಕವು ಆರಂಭವಾದಾಗಿನಿಂದಲೂ ಬಡ ಮತ್ತು ದುರ್ಬಲ ಕುಟುಂಬಗಳಿಗೆ ಸಹಾಯ ಮಾಡಲು ಭಾರತದ ಸಾಮಾಜಿಕ ಸಂರಕ್ಷಣಾ ಕಾರ್ಯಕ್ರಮಗಳನ್ನು ಬಲಪಡಿಸಲು ಒಟ್ಟಾರೆ ₹ 12,264.54 ಕೋಟಿ ಮೊತ್ತದ ನೆರವು ನೀಡಲಾಗಿದೆ ಎಂದು ಅದು ತಿಳಿಸಿದೆ.</p>.<p>ಬೀದಿ ಬದಿಯ ವ್ಯಾಪಾರಿಗಳು ಭಾರತದ ನಗರಗಳ ಅಸಂಘಟಿತ ಆರ್ಥಿಕತೆಯ ಭಾಗವಾಗಿದ್ದಾರೆ. ನ್ಯಾಷನಲ್ ಡಿಜಿಟಲ್ ಅರ್ಬನ್ ಮಿಷನ್ ಕಾರ್ಯಕ್ರಮವು ಬೀದಿ ಬದಿ ವ್ಯಾಪಾರಿಗಳಿಗೆ ಕೈಗೆಟುಕುವ ಬಡ್ಡಿ ದರಕ್ಕೆ ಗರಿಷ್ಠ ₹ 10 ಸಾವಿರದವರೆಗೆ ದುಡಿಯುವ ಬಂಡವಾಳದ ಸಾಲ ಒದಗಿಸಲಿದೆ. ನಗರ ಸ್ಥಳೀಯ ಸಂಸ್ಥೆಗಳು ಐ.ಟಿ. ಆಧಾರಿತ ವೇದಿಕೆಯ ಮೂಲಕ ಅವರನ್ನು ಗುರುತಿಸಲಾಗುತ್ತದೆ. ಹೊಸ ಸಾಲ ಕಾರ್ಯಕ್ರಮದಿಂದ ನಗರ ಪ್ರದೇಶಗಳ 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಪ್ರಯೋಜನ ಆಗಲಿದೆ ಎಂದು ಹೇಳಿದೆ.</p>.<p><strong>ಇದನ್ನೂ ಓದಿ... <a href="https://www.prajavani.net/business/commerce-news/gst-more-than-66-cr-returns-filed-in-4-years-says-finmin-843822.html" target="_blank">ಜಿಎಸ್ಟಿಗೆ ನಾಲ್ಕು ವರ್ಷ: 66 ಕೋಟಿಗೂ ಹೆಚ್ಚು ರಿಟರ್ನ್ಸ್ ಸಲ್ಲಿಕೆ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>