‘ಕರ್ಣಾಟಕ ಬ್ಯಾಂಕ್ ಸರ್ಕಾರಿ ಇಲಾಖೆಗಳ ಹಣಕಾಸು ವ್ಯವಹಾರ ಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈಗ, ಖಜಾನೆ-II (ಏ2) ಜೊತೆ ಸಂಯೋಜಿತಗೊಂಡು, ವಿವಿಧ ಯೋಜನೆಗಳ ಫಲಾನುಭವಿಗಳ ಖಾತೆಗೆ ನೇರ ನಗದು ಪ್ರಯೋಜನಗಳನ್ನು ವಿತರಿಸಲಿದೆ. ತಂತ್ರಜ್ಞಾನ ಮತ್ತು ಡಿಜಿಟಲ್ ವ್ಯವಹಾರಗಳ ಮೂಲಕ ಬ್ಯಾಂಕ್ ಸಾರ್ವಜನಿಕ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರದೊಂದಿಗೆ ಸಹಭಾಗಿಯಾಗಲು ಈ ಪಾಲುದಾರಿಕೆಯು ಸಹಕಾರಿ’ ಎಂದು ಬ್ಯಾಂಕ್ನ ಸಿಇಒ ಮಹಾಬಲೇಶ್ವರ ಎಂ.ಎಸ್. ತಿಳಿಸಿದ್ದಾರೆ.