<p><strong>ಮುಂಬೈ/ನವದೆಹಲಿ (ಪಿಟಿಐ): </strong>ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅವಧಿಗೂ ಮುನ್ನವೇ ₹15 ಸಾವಿರ ಕೋಟಿ ಮೌಲ್ಯದ ಸರ್ಕಾರಿ ಸಾಲಪತ್ರಗಳನ್ನು ಖರೀದಿಸಲು ನಿರ್ಧರಿಸಿದೆ.</p>.<p>ಮಾರ್ಚ್ 30ರಂದು ಖರೀದಿಗೆ ನಿರ್ಧರಿಸಲಾಗಿತ್ತು. ಆದರೆ, ಸದ್ಯದ ನಗದು ಮತ್ತು ಹಣಕಾಸು ಸ್ಥಿತಿಗಳನ್ನು ಗಮನದಲ್ಲಿ ಇಟ್ಟುಕೊಂಡು ನಾಲ್ಕು ದಿನ ಮುಂಚಿತವಾಗಿಯೇ ಅಂದರೆ ಮಾರ್ಚ್ 26ರಂದು ಖರೀದಿಸಲು ನಿರ್ಧರಿಸಿದೆ.ಮಾರುಕಟ್ಟೆಗೆ ಹೆಚ್ಚಿನ ನಗದು ಲಭ್ಯವಿರುವಂತೆ ಮಾಡುವ ಉದ್ದೇಶದಿಂದಮಾರ್ಚ್ನಲ್ಲಿ ಎರಡು ಕಂತುಗಳಲ್ಲಿ ಒಟ್ಟಾರೆ ₹30 ಸಾವಿರ ಕೋಟಿ ಮೌಲ್ಯದ ಸಾಲಪತ್ರಗಳನ್ನು ಖರೀದಿಸಲು ಆರ್ಬಿಐ ನಿರ್ಧರಿಸಿದೆ. ಮೊದಲ ಕಂತು ಮಾರ್ಚ್ 24ರಂದು ನಡೆಯಲಿದೆ.</p>.<p>ಕೊರೊನಾ–2 ವೈರಸ್ ಹಾವಳಿ ಯಿಂದಾಗಿ ಹಣಕಾಸು ಮಾರುಕಟ್ಟೆ ಒತ್ತಡದಲ್ಲಿದೆ. ಹೀಗಾಗಿ ಮಾರುಕಟ್ಟೆಯು ಸಹಜವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.</p>.<p><strong>ವಿತ್ತೀಯ ಉತ್ತೇಜನ: </strong>ಜಲನ್ ಒತ್ತಾಯ ಕೊರೊನಾ ವೈರಸ್ನಿಂದ ಆಗಿರುವ ಪರಿಣಾಮಗಳನ್ನು ತಗ್ಗಿಸಲು ವಿತ್ತೀಯ ಉತ್ತೇಜನಾ ಕ್ರಮಗಳನ್ನು ಜಾರಿಗೊಳಿಸುವಂತೆ ಆರ್ಬಿಐನ ಮಾಜಿ ಗವರ್ನರ್ ಬಿಮಲ್ ಜಲನ್ ಒತ್ತಾಯಿಸಿದ್ದಾರೆ.ದೇಶದ ಆರ್ಥಿಕತೆಯು ಈಗಾಗಲೇ ಮಂದಗತಿಯಲ್ಲಿದೆ. ಇದೀಗ ‘ಕೋವಿಡ್–19’ಯಿಂದಾಗಿ ಉದ್ಯೋಗ ನಷ್ಟವಾಗಲಿದ್ದು, ಆರ್ಥಿಕತೆಗೆ ಇನ್ನಷ್ಟು ಸಮಸ್ಯೆಯಾಗಲಿದೆ ಎಂದು ಹೇಳಿದ್ದಾರೆ.</p>.<p>‘ವಿತ್ತೀಯ ಕೊರತೆ ಬಗ್ಗೆ ಈಗ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ದೇಶದ ಸುರಕ್ಷತೆ ದೃಷ್ಟಿಯಿಂದ ವಿತ್ತೀಯ ಕೊರತೆ ಬಗ್ಗೆ ಚಿಂತಿಸದೇ ಹೆಚ್ಚು ವೆಚ್ಚಮಾಡಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ/ನವದೆಹಲಿ (ಪಿಟಿಐ): </strong>ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅವಧಿಗೂ ಮುನ್ನವೇ ₹15 ಸಾವಿರ ಕೋಟಿ ಮೌಲ್ಯದ ಸರ್ಕಾರಿ ಸಾಲಪತ್ರಗಳನ್ನು ಖರೀದಿಸಲು ನಿರ್ಧರಿಸಿದೆ.</p>.<p>ಮಾರ್ಚ್ 30ರಂದು ಖರೀದಿಗೆ ನಿರ್ಧರಿಸಲಾಗಿತ್ತು. ಆದರೆ, ಸದ್ಯದ ನಗದು ಮತ್ತು ಹಣಕಾಸು ಸ್ಥಿತಿಗಳನ್ನು ಗಮನದಲ್ಲಿ ಇಟ್ಟುಕೊಂಡು ನಾಲ್ಕು ದಿನ ಮುಂಚಿತವಾಗಿಯೇ ಅಂದರೆ ಮಾರ್ಚ್ 26ರಂದು ಖರೀದಿಸಲು ನಿರ್ಧರಿಸಿದೆ.ಮಾರುಕಟ್ಟೆಗೆ ಹೆಚ್ಚಿನ ನಗದು ಲಭ್ಯವಿರುವಂತೆ ಮಾಡುವ ಉದ್ದೇಶದಿಂದಮಾರ್ಚ್ನಲ್ಲಿ ಎರಡು ಕಂತುಗಳಲ್ಲಿ ಒಟ್ಟಾರೆ ₹30 ಸಾವಿರ ಕೋಟಿ ಮೌಲ್ಯದ ಸಾಲಪತ್ರಗಳನ್ನು ಖರೀದಿಸಲು ಆರ್ಬಿಐ ನಿರ್ಧರಿಸಿದೆ. ಮೊದಲ ಕಂತು ಮಾರ್ಚ್ 24ರಂದು ನಡೆಯಲಿದೆ.</p>.<p>ಕೊರೊನಾ–2 ವೈರಸ್ ಹಾವಳಿ ಯಿಂದಾಗಿ ಹಣಕಾಸು ಮಾರುಕಟ್ಟೆ ಒತ್ತಡದಲ್ಲಿದೆ. ಹೀಗಾಗಿ ಮಾರುಕಟ್ಟೆಯು ಸಹಜವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.</p>.<p><strong>ವಿತ್ತೀಯ ಉತ್ತೇಜನ: </strong>ಜಲನ್ ಒತ್ತಾಯ ಕೊರೊನಾ ವೈರಸ್ನಿಂದ ಆಗಿರುವ ಪರಿಣಾಮಗಳನ್ನು ತಗ್ಗಿಸಲು ವಿತ್ತೀಯ ಉತ್ತೇಜನಾ ಕ್ರಮಗಳನ್ನು ಜಾರಿಗೊಳಿಸುವಂತೆ ಆರ್ಬಿಐನ ಮಾಜಿ ಗವರ್ನರ್ ಬಿಮಲ್ ಜಲನ್ ಒತ್ತಾಯಿಸಿದ್ದಾರೆ.ದೇಶದ ಆರ್ಥಿಕತೆಯು ಈಗಾಗಲೇ ಮಂದಗತಿಯಲ್ಲಿದೆ. ಇದೀಗ ‘ಕೋವಿಡ್–19’ಯಿಂದಾಗಿ ಉದ್ಯೋಗ ನಷ್ಟವಾಗಲಿದ್ದು, ಆರ್ಥಿಕತೆಗೆ ಇನ್ನಷ್ಟು ಸಮಸ್ಯೆಯಾಗಲಿದೆ ಎಂದು ಹೇಳಿದ್ದಾರೆ.</p>.<p>‘ವಿತ್ತೀಯ ಕೊರತೆ ಬಗ್ಗೆ ಈಗ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ದೇಶದ ಸುರಕ್ಷತೆ ದೃಷ್ಟಿಯಿಂದ ವಿತ್ತೀಯ ಕೊರತೆ ಬಗ್ಗೆ ಚಿಂತಿಸದೇ ಹೆಚ್ಚು ವೆಚ್ಚಮಾಡಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>