<p><strong>ನವದೆಹಲಿ(ಪಿಟಿಐ): </strong>ದೊಡ್ಡ ಮೊತ್ತದ ಹಣ ಸಂಗ್ರಹ ನಿರೀಕ್ಷೆಯಲ್ಲಿ ಮತ್ತೆ ಷೇರುಪೇಟೆಯತ್ತ ಕಣ್ಣುನೆಟ್ಟಿರುವ ಕೇಂದ್ರ ಸರ್ಕಾರ, ಮತ್ತೊಂದು ಸುತ್ತಿನ ಹೂಡಿಕೆ ಹಿಂತೆಗೆತ ಕ್ರಮಕ್ಕೆ ಚಿಂತನೆ ನಡೆಸಿದೆ. ಆ ಮೂಲಕ ಪ್ರಸಕ್ತ ಹಣಕಾಸು ವರ್ಷ 30 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನೂ ಹೊಂದಿದೆ.<br /> <br /> ಸದ್ಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಸಾಕಷ್ಟು ಲಾಭವನ್ನೂ ತಂದುಕೊಡುತ್ತಿರುವ ಸರ್ಕಾರಿ ಸ್ವಾಮ್ಯದ ಕೆಲವು ದೊಡ್ಡ ಸಂಸ್ಥೆಗಳಲ್ಲಿನ ತನ್ನ ಷೇರು ಪಾಲನ್ನು ಷೇರುಪೇಟೆಯಲ್ಲಿ ಮಾರಾಟಕ್ಕಿಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.<br /> <br /> ತೈಲ, ಇಂಧನ, ಕಲ್ಲಿದ್ದಲು ಮತ್ತು ಉಕ್ಕು ಕ್ಷೇತ್ರದಲ್ಲಿನ ಸರ್ಕಾರಿ ಸ್ವಾಮ್ಯದ ಕಂಪನಿಗಳು ಉತ್ತಮ ಲಾಭ ತಂದುಕೊಡುತ್ತಿದ್ದು, ಈ ಸಂಸ್ಥೆಗಳಲ್ಲಿನ ಸರ್ಕಾರದ ಷೇರುಗಳು ಸದ್ಯದಲ್ಲಿಯೇ ಪೇಟೆಯಲ್ಲಿ ಮಾರಾಟಕ್ಕೆ ಬರುವ ಸಾಧ್ಯತೆ ಇದೆ.<br /> <br /> `ಹೂಡಿಕೆ ಹಿಂತೆಗೆತ ಪ್ರಸ್ತಾವನೆ ಸದ್ಯಕ್ಕಿನ್ನೂ ಕಲ್ಪನೆ ಹಂತದಲ್ಲಿಯೇ ಇದೆ. ಹೂಡಿಕೆ ಹಿಂತೆಗೆತ ಇಲಾಖೆ ಮುಂದಿನ ವಾರ ಸಭೆ ಸೇರಲಿದ್ದು, ಈ ಬಗ್ಗೆ ಚರ್ಚಿಸಲಿದೆ. ನಂತರ ಕಲ್ಲಿದ್ದಲು, ಪೆಟ್ರೋಲಿಯಂ ಸೇರಿದಂತೆ ಸಂಬಂಧಿಸಿದ ಇತರೆ ಸಚಿವಾಲಯಗಳ ಗಮನಕ್ಕೂ ಈ ವಿಚಾರವನ್ನು ತರಲಾಗುವುದು. ಅಲ್ಲಿ ಈ ಕ್ರಮದ ಸಾಧಕ-ಬಾಧಕಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ~ ಎಂದು ಹೂಡಿಕೆ ಹಿಂತೆಗೆತ ಇಲಾಖೆ ಮೂಲಗಳು ತಿಳಿಸಿವೆ.<br /> <br /> `ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆ~ಗಳಲ್ಲಿ 220 ಕಂಪನಿಗಳಲ್ಲಿನ ಸರ್ಕಾರದ ಬಂಡವಾಳವನ್ನು ಹಿಂತೆಗೆಯುವ ಮೂಲಕ 2011-12ನೇ ಸಾಲಿನಲ್ಲಿ ಭಾರಿ ಹಣ ಸಂಗ್ರಹದ ಗುರಿ ಹೊಂದಲಾಗಿತ್ತು. ಆದರೆ, ಕಳೆದ ಹಣಕಾಸು ವರ್ಷದಲ್ಲಿ ರೂ. 14,000 ಕೋಟಿಯನ್ನು ಮಾತ್ರ ಷೇರುಪೇಟೆಯಿಂದ ಪಡೆಯಲು ಸಾಧ್ಯವಾಯಿತು. ಈ ಬಾರಿ ಮತ್ತೊಂದು ಸುತ್ತಿನ ಹೂಡಿಕೆ ಹಿಂತೆಗೆತ ಕ್ರಮದ ಮೂಲಕ ರೂ. 30,000 ಸಾವಿರ ಕೋಟಿ ಪಡೆಯುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ(ಪಿಟಿಐ): </strong>ದೊಡ್ಡ ಮೊತ್ತದ ಹಣ ಸಂಗ್ರಹ ನಿರೀಕ್ಷೆಯಲ್ಲಿ ಮತ್ತೆ ಷೇರುಪೇಟೆಯತ್ತ ಕಣ್ಣುನೆಟ್ಟಿರುವ ಕೇಂದ್ರ ಸರ್ಕಾರ, ಮತ್ತೊಂದು ಸುತ್ತಿನ ಹೂಡಿಕೆ ಹಿಂತೆಗೆತ ಕ್ರಮಕ್ಕೆ ಚಿಂತನೆ ನಡೆಸಿದೆ. ಆ ಮೂಲಕ ಪ್ರಸಕ್ತ ಹಣಕಾಸು ವರ್ಷ 30 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನೂ ಹೊಂದಿದೆ.<br /> <br /> ಸದ್ಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಸಾಕಷ್ಟು ಲಾಭವನ್ನೂ ತಂದುಕೊಡುತ್ತಿರುವ ಸರ್ಕಾರಿ ಸ್ವಾಮ್ಯದ ಕೆಲವು ದೊಡ್ಡ ಸಂಸ್ಥೆಗಳಲ್ಲಿನ ತನ್ನ ಷೇರು ಪಾಲನ್ನು ಷೇರುಪೇಟೆಯಲ್ಲಿ ಮಾರಾಟಕ್ಕಿಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.<br /> <br /> ತೈಲ, ಇಂಧನ, ಕಲ್ಲಿದ್ದಲು ಮತ್ತು ಉಕ್ಕು ಕ್ಷೇತ್ರದಲ್ಲಿನ ಸರ್ಕಾರಿ ಸ್ವಾಮ್ಯದ ಕಂಪನಿಗಳು ಉತ್ತಮ ಲಾಭ ತಂದುಕೊಡುತ್ತಿದ್ದು, ಈ ಸಂಸ್ಥೆಗಳಲ್ಲಿನ ಸರ್ಕಾರದ ಷೇರುಗಳು ಸದ್ಯದಲ್ಲಿಯೇ ಪೇಟೆಯಲ್ಲಿ ಮಾರಾಟಕ್ಕೆ ಬರುವ ಸಾಧ್ಯತೆ ಇದೆ.<br /> <br /> `ಹೂಡಿಕೆ ಹಿಂತೆಗೆತ ಪ್ರಸ್ತಾವನೆ ಸದ್ಯಕ್ಕಿನ್ನೂ ಕಲ್ಪನೆ ಹಂತದಲ್ಲಿಯೇ ಇದೆ. ಹೂಡಿಕೆ ಹಿಂತೆಗೆತ ಇಲಾಖೆ ಮುಂದಿನ ವಾರ ಸಭೆ ಸೇರಲಿದ್ದು, ಈ ಬಗ್ಗೆ ಚರ್ಚಿಸಲಿದೆ. ನಂತರ ಕಲ್ಲಿದ್ದಲು, ಪೆಟ್ರೋಲಿಯಂ ಸೇರಿದಂತೆ ಸಂಬಂಧಿಸಿದ ಇತರೆ ಸಚಿವಾಲಯಗಳ ಗಮನಕ್ಕೂ ಈ ವಿಚಾರವನ್ನು ತರಲಾಗುವುದು. ಅಲ್ಲಿ ಈ ಕ್ರಮದ ಸಾಧಕ-ಬಾಧಕಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ~ ಎಂದು ಹೂಡಿಕೆ ಹಿಂತೆಗೆತ ಇಲಾಖೆ ಮೂಲಗಳು ತಿಳಿಸಿವೆ.<br /> <br /> `ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆ~ಗಳಲ್ಲಿ 220 ಕಂಪನಿಗಳಲ್ಲಿನ ಸರ್ಕಾರದ ಬಂಡವಾಳವನ್ನು ಹಿಂತೆಗೆಯುವ ಮೂಲಕ 2011-12ನೇ ಸಾಲಿನಲ್ಲಿ ಭಾರಿ ಹಣ ಸಂಗ್ರಹದ ಗುರಿ ಹೊಂದಲಾಗಿತ್ತು. ಆದರೆ, ಕಳೆದ ಹಣಕಾಸು ವರ್ಷದಲ್ಲಿ ರೂ. 14,000 ಕೋಟಿಯನ್ನು ಮಾತ್ರ ಷೇರುಪೇಟೆಯಿಂದ ಪಡೆಯಲು ಸಾಧ್ಯವಾಯಿತು. ಈ ಬಾರಿ ಮತ್ತೊಂದು ಸುತ್ತಿನ ಹೂಡಿಕೆ ಹಿಂತೆಗೆತ ಕ್ರಮದ ಮೂಲಕ ರೂ. 30,000 ಸಾವಿರ ಕೋಟಿ ಪಡೆಯುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>