<p><strong>ಮುಂಬೈ (ಪಿಟಿಐ): </strong> ಯೂರೋಪ್ ಷೇರುಪೇಟೆಗಳು ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ, ಮತ್ತೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್ಐಐ) ಚಟುವಟಿಕೆ ಹೆಚ್ಚಿದ್ದು, ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ ಬುಧವಾರದ ವಹಿವಾಟಿನಲ್ಲಿ 286 ಅಂಶಗಳಷ್ಟು ಏರಿಕೆ ಕಂಡಿದೆ. <br /> <br /> ಮಹೀಂದ್ರಾ ಸತ್ಯಂ ಟೆಕ್ ಮಹೀಂದ್ರಾದಲ್ಲಿ ವಿಲೀನಗೊಂಡ ಹಿನ್ನೆಲೆಯಲ್ಲಿ, ಎರಡೂ ಕಂಪೆನಿಗಳ ಷೇರು ದರಗಳು ಏರಿಕೆ ಕಂಡವು. ರಿಯಾಲ್ಟಿ, ಬ್ಯಾಂಕಿಂಗ್, ಲೋಹ ವಲಯದ ಷೇರುಗಳು ಲಾಭ ಮಾಡಿಕೊಂಡವು. ದಿನದಂತ್ಯಕ್ಕೆ 17,601 ಅಂಶಗಳಿಗೆ ವಹಿವಾಟು ಕೊನೆಗೊಂಡಿತು. <br /> <br /> ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ ದಿನದ ವಹಿವಾಟಿನಲ್ಲಿ 90 ಅಂಶಗಳಷ್ಟು ಏರಿಕೆ ಕಂಡು 5,364 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು. `ಎಫ್ಐಐ~ ಹೂಡಿಕೆದಾರರು ಮಂಗಳವಾರ ಒಟ್ಟು 111 ಕೋಟಿ ಮೊತ್ತದ ಷೇರು ಖರೀದಿಸಿದ್ದಾರೆ. ಬಜೆಟ್ ಹಿನ್ನೆಲೆಯಲ್ಲಿ ಸೂಚ್ಯಂಕ ಇಳಿಕೆ ಕಂಡಿತ್ತು. ಹಣದುಬ್ಬರ ಹೆಚ್ಚಿರುವುದರಿಂದ `ಆರ್ಬಿಐ~ ಬಡ್ಡಿ ದರ ಕಡಿತಕ್ಕೆ ಮುಂದಾಗುವುದಿಲ್ಲ ಎನ್ನುವ ಸಂಗತಿ ಹೂಡಿಕೆದಾರರ ವಿಶ್ವಾಸ ತಗ್ಗಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ): </strong> ಯೂರೋಪ್ ಷೇರುಪೇಟೆಗಳು ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ, ಮತ್ತೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್ಐಐ) ಚಟುವಟಿಕೆ ಹೆಚ್ಚಿದ್ದು, ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ ಬುಧವಾರದ ವಹಿವಾಟಿನಲ್ಲಿ 286 ಅಂಶಗಳಷ್ಟು ಏರಿಕೆ ಕಂಡಿದೆ. <br /> <br /> ಮಹೀಂದ್ರಾ ಸತ್ಯಂ ಟೆಕ್ ಮಹೀಂದ್ರಾದಲ್ಲಿ ವಿಲೀನಗೊಂಡ ಹಿನ್ನೆಲೆಯಲ್ಲಿ, ಎರಡೂ ಕಂಪೆನಿಗಳ ಷೇರು ದರಗಳು ಏರಿಕೆ ಕಂಡವು. ರಿಯಾಲ್ಟಿ, ಬ್ಯಾಂಕಿಂಗ್, ಲೋಹ ವಲಯದ ಷೇರುಗಳು ಲಾಭ ಮಾಡಿಕೊಂಡವು. ದಿನದಂತ್ಯಕ್ಕೆ 17,601 ಅಂಶಗಳಿಗೆ ವಹಿವಾಟು ಕೊನೆಗೊಂಡಿತು. <br /> <br /> ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ ದಿನದ ವಹಿವಾಟಿನಲ್ಲಿ 90 ಅಂಶಗಳಷ್ಟು ಏರಿಕೆ ಕಂಡು 5,364 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು. `ಎಫ್ಐಐ~ ಹೂಡಿಕೆದಾರರು ಮಂಗಳವಾರ ಒಟ್ಟು 111 ಕೋಟಿ ಮೊತ್ತದ ಷೇರು ಖರೀದಿಸಿದ್ದಾರೆ. ಬಜೆಟ್ ಹಿನ್ನೆಲೆಯಲ್ಲಿ ಸೂಚ್ಯಂಕ ಇಳಿಕೆ ಕಂಡಿತ್ತು. ಹಣದುಬ್ಬರ ಹೆಚ್ಚಿರುವುದರಿಂದ `ಆರ್ಬಿಐ~ ಬಡ್ಡಿ ದರ ಕಡಿತಕ್ಕೆ ಮುಂದಾಗುವುದಿಲ್ಲ ಎನ್ನುವ ಸಂಗತಿ ಹೂಡಿಕೆದಾರರ ವಿಶ್ವಾಸ ತಗ್ಗಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>