ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ‘ರಸ್ತೆ ನಿರ್ಮಾಣವಾಗುತ್ತಿರುವ ಸ್ಥಳ ಕೆರೆಗೆ ಸೇರಿದೆಯೇ ಅಥವಾ ಖಾಸಗಿಯವರಿಗೆ ಸೇರಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಸಂಬಂಧಪಟ್ಟ ಇಲಾಖೆಯಿಂದ ಈ ಕುರಿತಂತೆ ಮಾಹಿತಿ ಕೇಳಲಾಗಿದೆ. ಅದರೆ ಇನ್ನೂ ಮಾಹಿತಿ ಕೈಸೇರಿಲ್ಲ. ವರದಿ ಕೈಸೇರುವವರೆಗೂ ಕಾಮಗಾರಿ ಮುಂದುವರಿಸುವುದಿಲ್ಲ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.