‘ಶ್ರೀನಿವಾಸ್ ಅವರು ಪ್ರಸಕ್ತ ವರ್ಷದ ಫೆ. 1ರಿಂದಲೇ ಕರ್ತವ್ಯಕ್ಕೆ ಗೈರುಹಾಜರಾಗಿದ್ದಾರೆ. ಅಂದಿನಿಂದಲೇ ರಾಜೀನಾಮೆ ಪರಿಗಣಿಸಬೇಕು ಎಂದು ಕೋರಿದ್ದಾರೆ. ಅವರ ವಿರುದ್ಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತಾಲಯದಲ್ಲಿ ಯಾವುದೇ ವಿಚಾರಣೆಗಳು ಬಾಕಿ ಇಲ್ಲ. ಅಲ್ಲದೆ, ಅವರು ಕೇವಲ 12 ತಿಂಗಳು ಸದರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿರುವ ಕಾರಣ, ಕರ್ನಾಟಕ ನಾಗರಿಕ ಸೇವಾ ನಿಯಮದಂತೆ (ಕಾಯಂ ಪೂರ್ವ ಸೇವಾ ಅವಧಿ) ಅವರ ರಾಜೀನಾಮೆ ಅಂಗೀಕರಿಸಲಾಗಿದೆ’ ಎಂದು ಸರ್ಕಾರದ ಉಪ ಕಾರ್ಯದರ್ಶಿ ವಿ. ಹನುಮಂತಯ್ಯ ಲಿಖಿತ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.