ಬೆಳಿಗ್ಗೆಯಿಂದ ಉಪವಾಸ ವ್ರತ ಮಾಡಿದವರು ಸಮೀಪದ ಈಶ್ವರ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ, ದರ್ಶನ ಪಡೆದ ನಂತರ ಹಣ್ಣು, ಹಾಲು ಸೇವಿಸಿ ಉಪವಾಸ ಮುಕ್ತಾಯಗೊಳಿಸಿದರು. ದ್ರಾಕ್ಷಿ, ಕರಬೂಜ, ದಾಳಿಂಬೆ, ಕಲ್ಲಂಗಡಿ, ಬಾಳೆಹಣ್ಣು, ಉತ್ತತ್ತಿ, ಶೇಂಗಾ ಉಂಡಿ, ಸಾಬುದಾನಿ ಪಾಯಸ, ಉಪ್ಪಿಟ್ಟು, ಉಂಡೆ, ಅರಳು ಈ ಉಪವಾಸ ವ್ರತದ ವಿಶೇಷ ಖ್ಯಾದ್ಯಗಳು ಎಲ್ಲರ ಮನೆಯಲ್ಲಿ ಇದ್ದವು. ಅಹೋರಾತ್ರಿ ಭಜನಾ ಕಾರ್ಯಕ್ರಮಗಳು ನಡೆದವು. ಮುನಿರಾಬಾದಿನ ಮಾರ್ಕೇಂಡೇಶ್ವರ, ಪಂಪಾಸರೋವರ, ಹನಮಸಾಗರದ ಚಂದಾಲಿಂಗ, ತಾವರಗೇರಾ ಸಮೀಪದ ಪುರ, ಅಳವಂಡಿ ಸಿದ್ಧೇಶ್ವರ ದೇವಸ್ಥಾನ, ಮಹಾಮಾಯೆ ಮಂದಿರಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿದ್ದು, ವಿಶೇಷವಾಗಿತ್ತು.