ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ | 26-07-2020ರಿಂದ 01-08-2020ರವರೆಗೆ

ಅಕ್ಷರ ಗಾತ್ರ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಮಾದಾಪುರ
ಸಂಪರ್ಕ: 8197304680

**

ಮೇಷ:ಅಶ್ವಿನಿ, ಭರಣಿ, ಕೃತ್ತಿಕಾ 1
ನಿಮ್ಮ ಮುಂದೆ ನಾಟಕವಾಡುವ ವಿರೋಧಿಗಳು ಸಿಕ್ಕಿಬೀಳುವರು. ಇವರು ನಿಮಗೆ ಮೋಸ ಮಾಡಬಹುದು, ಎಚ್ಚರದಿಂದಿರಿ. ಸಾಂಸಾರಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸೋದರರೊಡನೆ ಉತ್ತಮ ಬಾಂಧವ್ಯ ನಿರೀಕ್ಷಿಸಬಹುದು. ಬಾಕಿ ಸಾಲಗಳನ್ನು ತೀರಿಸಿ ನೆಮ್ಮದಿ ಕಾಣುವಿರಿ. ಹಣದ ಒಳಹರಿವು ನಿರೀಕ್ಷಿತ ಮಟ್ಟದಲ್ಲಿರಲಿದೆ. ವೃತ್ತಿಯಲ್ಲಿ ಏಳಿಗೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗುವ ಸಿಗುವ ಕಾಲ.

ವೃಷಭ:ಕೃತ್ತಿಕಾ 2,3,4 ರೋಹಿಣಿ, ಮೃಗಶಿರಾ 1,2
ದೂರ ಪ್ರಯಾಣ ಅಷ್ಟು ಒಳಿತಲ್ಲ. ಮಕ್ಕಳಿಗೆ ಬುದ್ಧಿ ಹೇಳಿ ಸರಿದಾರಿಗೆ ತರುವುದು ಉತ್ತಮ, ಇಲ್ಲವಾದಲ್ಲಿ ನಿಂದನೆಗೆ ಗುರಿಯಾಗುವಿರಿ. ಹಣದ ಹರಿವು ಅಗತ್ಯಕ್ಕೆ ತಕ್ಕಂತೆ ಇರುತ್ತದೆ. ಅನ್ಯರ ವಿಷಯಗಳಲ್ಲಿ ತಲೆ ಹಾಕಬೇಡಿ. ಹೆಣ್ಣು ಮಕ್ಕಳ ಅಭಿವೃದ್ಧಿ ಉತ್ತಮ. ಕೊಟ್ಟಿದ್ದ ಸಾಲದಲ್ಲಿ ಸ್ವಲ್ಪ ಭಾಗ ಬರುವ ಸಾಧ್ಯತೆಯಿದೆ. ಹಿರಿಯರಿಂದ ಕೃಷಿಯ ಮಾರ್ಗದರ್ಶನ ಸಿಗಲಿದೆ.

ಮಿಥುನ:ಮೃಗಶಿರಾ 3,4 ಆರಿದ್ರಾ, ಪುನರ್ವಸು 1,2,3
ಸಮಯಕ್ಕೆ ಸರಿಯಾಗಿ ತೆಗೆದುಕೊಂಡ ನಿರ್ಧಾರಗಳು ಫಲ ನೀಡುತ್ತವೆ. ಶತ್ರುಗಳ ಕಾಟ ಜಾಸ್ತಿ. ವೃತ್ತಿಯಲ್ಲಿರುವವರಿಗೆ ಕೆಲಸದ ಒತ್ತಡ ಹೆಚ್ಚು. ಯಾರೊಂದಿಗೂ ಜಗಳ ಒಳಿತಲ್ಲ. ಸರ್ಕಾರಿ ಮೂಲದ ಹಣ ಬರುತ್ತದೆ. ಸೇನೆಯಲ್ಲಿರುವವರಿಗೆ ಸೌಲಭ್ಯ ಸಿಗಲಿವೆ. ಸಂಗಾತಿಯ ಸಂತೋಷಕ್ಕಾಗಿ ಸ್ವಲ್ಪ ಹಣ ಖರ್ಚಾಗುತ್ತದೆ. ಸರ್ಕಾರದಿಂದ ನಿವೇಶನ ಅಥವಾ ಮನೆ ನಿರೀಕ್ಷಿಸುತ್ತಿರುವವರೆಗೆ ಅನುಕೂಲಕರ ವಾತಾವರಣ.

ಕಟಕ:ಪುನರ್ವಸು 4 ಪುಷ್ಯ, ಆಶ್ಲೇಷ
ಕಚೇರಿ ಕೆಲಸದ ಮೇಲೆ ಅನಿವಾರ್ಯವಾಗಿ ದೂರ ಪ್ರಯಾಣದ ಸಾಧ್ಯತೆ ಇದೆ, ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ರುಚಿಕರ ಭೋಜನದ ಸಾಧ್ಯತೆಯಿದೆ. ಕಳೆದುಹೋಗಿದ್ದನಿಮ್ಮ ಆಸ್ತಿ ದಾಖಲೆಗಳು ಸಿಗುತ್ತವೆ. ಆರ್ಥಿಕ ಸ್ಥಿತಿ ಸ್ವಲ್ಪ ಸುಧಾರಿಸುತ್ತದೆ. ಹೊಸ ವ್ಯವಹಾರಗಳ ಬಗ್ಗೆ ಚಿಂತನೆ ನಡೆಸುವಿರಿ. ಬಂಧುಗಳು ಸಹಾಯ ಕೇಳಲು ಬರುವರು, ಆದರೆ ಅವರ ಸಾಲಕ್ಕಾಗಿ ಜಾಮೀನು ನೀಡುವುದು ಬೇಡ.

ಸಿಂಹ:ಮಖ, ಪೂರ್ವ ಫಲ್ಗುಣಿ, ಉತ್ತರ ಫಲ್ಗುಣಿ 1
ಸಾಲ ತೀರಿಸುವ ಅವಕಾಶ ಒದಗುತ್ತದೆ. ಅನಿರೀಕ್ಷಿತ ಹಣ ಒದಗುವ ಸಾಧ್ಯತೆ ಇದೆ. ಇದನ್ನು ಒಳಿತಿಗಾಗಿ ಬಳಸಿ. ಯಾರೊಂದಿಗೂ ದುಡುಕು ಮಾತು ಬೇಡ. ತಾಯಿಯಿಂದ ಧನಸಹಾಯದ ಸಾಧ್ಯತೆ ಇದೆ. ವಿದ್ಯುತ್ ವಿಭಾಗದಲ್ಲಿ ಕೆಲಸ ಮಾಡುವವರು ಬಹಳ ಎಚ್ಚರಿಕೆಯಿಂದಿರಿ. ಉದ್ಯೋಗಸ್ಥ ಸ್ತ್ರೀಯರಿಗೆ ಅಧಿಕಾರದಲ್ಲಿ ಮುನ್ನಡೆ. ಹೆಂಗಸರ ಸಿದ್ಧ ಉಡುಪುಗಳನ್ನು ಮಾರುವವರಿಗೆ ವ್ಯವಹಾರ ವೃದ್ಧಿಸಲಿದೆ.

ಕನ್ಯಾ:ಉತ್ತರ ಫಲ್ಗುಣಿ 2,3,4 ಹಸ್ತ, ಚಿತ್ತಾ 1,2
ಸಂಬಂಧಿಕರು ಅಥವಾ ಪರಿಚಿತರಿಂದ ನಿಮ್ಮ ಗೌರವ ಹೆಚ್ಚುತ್ತದೆ. ಕೆಲವು ಕೆಲಸಗಳನ್ನು ಗುಟ್ಟಾಗಿ ಮಾಡಲು ಹೋಗಿ ಎಡವಟ್ಟು ಮಾಡಿಕೊಳ್ಳುವಿರಿ, ಕುಟುಂಬದವರೊಡನೆ ಸಮಾಲೋಚಿಸಿ ಮಾಡಿರಿ. ಕೆಲಸದಲ್ಲಿ ಆಲಸಿಗಳು ಆಗಬೇಡಿ. ಅನಿರೀಕ್ಷಿತ ಪ್ರೀತಿ-ಪ್ರೇಮಗಳಲ್ಲಿ ಸಿಲುಕುವ ಸಾಧ್ಯತೆಯಿದೆ. ಮಕ್ಕಳ ಪ್ರಗತಿಯಲ್ಲಿ ಸ್ವಲ್ಪ ಹಿನ್ನಡೆ. ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಯ್ದು ಕೊಂಡಲ್ಲಿ ಪ್ರಗತಿ ಇರುತ್ತದೆ.

ತುಲಾ:ಚಿತ್ತಾ 3,4 ಸ್ವಾತಿ, ವಿಶಾಖೆ 1,2,3
ಆದಾಯ ಮತ್ತು ವ್ಯಯ ಸಮ. ಉದ್ಯೋಗ ಬದಲಿಸುವ ಆಲೋಚನೆ ಬೇಡ. ಸಂಗಾತಿಯಿಂದ ಧನಸಹಾಯ ಒದಗುತ್ತದೆ. ಮನೆಯಲ್ಲಿ ಎಲ್ಲರೂ ಸಂತೋಷ ಕೂಟಕ್ಕಾಗಿ ಸೇರುವ ಸಾಧ್ಯತೆ ಇದೆ. ನಿಮ್ಮ ಬಹು ಆಕಾಂಕ್ಷಿತ ಕೆಲಸ ಕೈಗೂಡಲಿದೆ. ಸ್ನೇಹಿತರಿಗೆ ನಿಮ್ಮ ಒಳಗುಟ್ಟು ಹೇಳಿಕೊಳ್ಳದಿರಿ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಜವಾಬ್ದಾರಿಗಳು ಹೆಚ್ಚುತ್ತವೆ. ಆರೋಗ್ಯದ ಬಗ್ಗೆ ಎಚ್ಚರ ಇರಲಿ.

ವೃಶ್ಚಿಕ:ವಿಶಾಖೆ 4 ಅನೂರಾಧ, ಜ್ಯೇಷ್ಠ
ಆತ್ಮವಿಶ್ವಾಸದ ಕೊರತೆ ಕಾಡಬಹುದು. ಮಾತಿನ ಮೇಲೆ ಹಿಡಿತವಿಲ್ಲದಿದ್ದಲ್ಲಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ. ಬಂಧುಗಳು ಕಷ್ಟ ಹೇಳಿಕೊಂಡು ಸಹಾಯ ಕೇಳುವರು. ನಿಮ್ಮ ಕಷ್ಟ ಕೇಳುವುದಿಲ್ಲವಲ್ಲ ಎಂಬ ಕೊರಗು ಕಾಡುತ್ತದೆ. ಅತಿ ಜಿಪುಣತನ ಬೇಡ. ತಂದೆಯಿಂದ ಸಹಾಯ ಸೌಲಭ್ಯಗಳು ದೊರೆಯುತ್ತವೆ.

ಧನುಸ್ಸು:ಮೂಲ, ಪೂರ್ವಾಷಾಢ, ಉತ್ತರಾಷಾಢ 1
ಕೆಲಸ ಕಾರ್ಯಗಳು ಕ್ರಮೇಣ ಕೈಗೂಡುತ್ತವೆ. ಹಿರಿಯರ ಆಸ್ತಿ ಮಾರಿ ಬೇರೆ ಆಸ್ತಿ ಕೊಳ್ಳುವ ಯೋಗವಿದೆ. ವಿದ್ಯಾರ್ಥಿಗಳಿಗೆ ಆತಂಕದ ಕ್ಷಣಗಳು ಎದುರಾದರೂ ನಂತರ ಸರಿಯಾಗುತ್ತದೆ. ನಿಮ್ಮ ನೇರ ನುಡಿಯು ಕೆಲವರ ಕಣ್ಣುಕೆಂಪಾಗಿಸಬಹುದು. ಧನಾದಾಯ ಹೇಳಿಕೊಳ್ಳುವಂತೆ ಇರುವುದಿಲ್ಲ. ಭೂಮಿ ವ್ಯವಹಾರ ಮಾಡುವವರಿಗೆ ವ್ಯವಹಾರ ವೃದ್ಧಿ. ಸರ್ಕಾರಿ ಅಧಿಕಾರಿಗಳಿಗೆ ಅನಿರೀಕ್ಷಿತ ವರ್ಗಾವಣೆ ಸಾಧ್ಯತೆ ಇದೆ.

ಮಕರ:ಉತ್ತರಾಷಾಢ 2,3,4 ಶ್ರವಣ, ಧನಿಷ್ಠ 1,2
ಅವಿವಾಹಿತರಿಗೆ ವಿವಾಹ ಯೋಗವಿದೆ. ಉದ್ಯೋಗದ ಸ್ಥಳದಲ್ಲಿ ದುಡುಕು ಮಾತು, ನಿಷ್ಠುರ ನಡವಳಿಕೆ ಬೇಡ. ಪಾಲುದಾರಿಕೆಯ ವ್ಯಾಪಾರದಲ್ಲಿ ಸ್ವಲ್ಪ ಲಾಭ ಇರುತ್ತದೆ. ಹಿರಿಯರ ನಡುವಿನ ಹೊಂದಾಣಿಕೆ ಕಡಿಮೆಯಿರುತ್ತದೆ. ಹೆಣ್ಣುಮಕ್ಕಳಿಗೆ ತಾಯಿ ಮನೆಯಿಂದ ಉಡುಗೊರೆ ಬರಬಹುದು. ಸ್ತ್ರೀಯರಿಗೆ ವ್ಯವಹಾರದಲ್ಲಿ ಮುನ್ನಡೆ. ರಕ್ತ ಸಂಬಂಧಿ ಖಾಯಿಲೆ ಇದ್ದವರು ಆಹಾರದಲ್ಲಿ ಎಚ್ಚರ ವಹಿಸಿರಿ.

ಕುಂಭ:ಧನಿಷ್ಠ 3,4 ಶತಭಿಷಾ, ಪೂರ್ವಾಭಾದ್ರ 1,2,3
ಅಡುಗೆ ತಯಾರಿಸುವವರಿಗೆ ಕೆಲಸ ಒದಗುವ ಸಾಧ್ಯತೆ ಇದೆ. ಹೊಸ ಸ್ನೇಹಿತರ ಪರಿಚಯವಾಗುತ್ತದೆ. ಯುವಕರ ಕೆಲಸದ ಮೇಲಿನ ಅಶ್ರದ್ಧೆಯು ಅವರ ವೃತ್ತಿಗೆ ತೊಂದರೆ ಆಗುವ ಸಾಧ್ಯತೆ ಇದೆ. ತಾಯಿಯಿಂದ ನಿರೀಕ್ಷಿತ ಸಹಾಯ ದೊರೆಯುತ್ತದೆ. ವೃತ್ತಿಯಲ್ಲಿ ಸ್ತ್ರೀ ಮೇಲಧಿಕಾರಿಗಳಿಂದ ಸಹಾಯ ಒದಗಿ ನಿಮ್ಮ ಮೇಲಿನ ಕಳಂಕ ತಪ್ಪುತ್ತದೆ. ಕೃಷಿಯಿಂದ ಲಾಭವಿದ್ದು ಉತ್ತಮ ಬೆಳೆಯನ್ನು ಸಹ ನಿರೀಕ್ಷಿಸಬಹುದು.

ಮೀನ:ಪೂರ್ವಾಭಾದ್ರ 4 ಉತ್ತರಭಾದ್ರ, ರೇವತಿ
ನಿಮ್ಮ ಮನಸ್ಸಿಗೆ ಬಂದ ಅನುಮಾನ ನಿಜವಾಗಿರುತ್ತದೆ. ಚಿಕ್ಕ ಮಕ್ಕಳ ಆರೋಗ್ಯ ಸರಿಯಾಗುತ್ತದೆ. ಸಂತಸದಿಂದಿರುವ ಈ ದಿನಗಳಲ್ಲಿ ನಿಮ್ಮ ಬಾಳಿನ ಒಂದು ಕಹಿ ಘಟನೆ ನೆನಪಿಗೆ ಬರುತ್ತದೆ. ಇಲ್ಲದ ವಾದ-ವಿವಾದಗಳಲ್ಲಿ ತೊಡಗುವುದು ಬೇಡ. ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದಲ್ಲಿ ತಪ್ಪುಗಳನ್ನು ಕಂಡುಹಿಡಿದು ಶಿಕ್ಷಿಸಲು ಅನುವಾಗುವರು. ಅವರಲ್ಲಿ ಕ್ಷಮೆಯಾಚಿಸಿದಲ್ಲಿ ಎಲ್ಲವೂ ಸರಿಯಾಗುವುದು. ವಾರದ ಮಧ್ಯದಲ್ಲಿ ಉತ್ಸಾಹ ಹೆಚ್ಚುವುದು. ದೇಹಾರೋಗ್ಯದ ಸುಧಾರಣೆ ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT