ಮಲ್ಲೇನಹಳ್ಳಿ ಬಳಿ ವಿದ್ಯುತ್ ಮಾರ್ಗದ ಕಾರ್ಯ ಚಾಲ್ತಿಯಲ್ಲಿದ್ದು, ಮಾರ್ಗದಲ್ಲಿ ನೆಡಲು ಕಂಬಗಳನ್ನು ರಸ್ತೆಯಲ್ಲಿ ಇಡಲಾಗಿತ್ತು. ತರೀಕೆರೆಯಿಂದ ಚಿಕ್ಕಮಗಳೂರು ಕಡೆಗೆ ಬರುತ್ತಿದ್ದ ವ್ಯಾನ್ನ ಚಾಲಕ ಕಂಬ ಗಮನಿಸಿ ವ್ಯಾನ್ ನಿಲ್ಲಿಸಿದ್ದಾರೆ. ವ್ಯಾನ್ ಹಿಂದಿದ್ದ ಬೈಕ್ನ ಸವಾರ ಆಗ ಬ್ರೇಕ್ ಹಾಕಿದಾಗ ಹಿಂಬದಿ ಸವಾರ ಮಿಥುನ್ ಬಲಭಾಗಕ್ಕೆ ಬಿದ್ದಿದ್ದಾರೆ. ಎದುರುಗಡೆ ಬರುತ್ತಿದ್ದ (ತರೀಕೆರೆ ಕಡೆಗೆ ಸಂಚರಿಸುತ್ತಿದ್ದ) ಕೆಎಸ್ಆರ್ಟಿಸಿ ಬಸ್ ಆತನ ಮೇಲೆ ಹರಿದಿದೆ. ತೀವ್ರ ಗಾಯಗೊಂಡಿದ್ದ ಮಿಥುನ್ ಆಸ್ಪತ್ರೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ.