ಬೆಂಗಳೂರಿನಲ್ಲಿ ವಾಸವಾಗಿರುವ ಯುವ ಉದ್ಯಮಿ ಮಂಜುನಾಥ ಬಂಡಿ ಹಾಗೂ ಬೆಂಗಳೂರಿನ ‘ಟೀಮ್ ಮಲ್ಲಯ್ಯ’ ತಂಡ ಕಳೆದ 9 ವರ್ಷಗಳಿಂದ ಅಮೀನಗಡದಿಂದ ಯುಗಾದಿ ಅಂಗವಾಗಿ ಶ್ರೀಶೈಲಕ್ಕೆ ಪಾದಯಾತ್ರೆ ಬೆಳೆಸುತ್ತಾರೆ. ಪಾದಯಾತ್ರೆ ಆಧ್ಯಾತ್ಮಿಕತೆ, ಶ್ರದ್ದಾ–ಭಕ್ತಿಯ ಜೊತೆಗೆ ಸಾಮಾಜಿಕ ಕಳಕಳಿಯ ಸಂದೇಶ ಸಾರುವ ಕಾರ್ಯ ಮಾಡುವ ತಂಡ, ಈ ಬಾರಿ 111 ಅಡಿ ಉದ್ದದ ಮಲ್ಲಯ್ಯನ ಚಿತ್ರವಿರುವ ಕೇಸರಿ ಧ್ವಜ ಹಾಗೂ 8 ಅಡಿ ಎತ್ತರದ ಮಾದರಿ ಮತಪತ್ರದ ಮೂಲಕ ಲೋಕಸಭೆ ಚುನಾವಣೆಗೆ ಜಾಗೃತಿ ಮೂಡಿಸಲು ಸಜ್ಜಾಗಿದೆ.