ಹಗಲು–ರಾತ್ರಿ ಚಳಿ, ಮಳೆ, ಬಿಸಿಲು ಎನ್ನದೇ ಸಮಾಜ ವಿರೋಧಿ ಶಕ್ತಿಗಳೊಂದಿಗೆ ಸಂಘರ್ಷದ ಬದುಕು ನಡೆಸುತ್ತಿರುವ ಪೊಲೀಸರನ್ನು ರಾಜ್ಯ ಸರ್ಕಾರ ಉಳಿದ ಇಲಾಖೆಗಳ ನೌಕರರ ಸಂಬಳ, ಸಾರಿಗೆ, ಸೌಲಭ್ಯಗಳೊಡನೆ ಸಮೀಕರಿಸುವುದು ಎಷ್ಟು ನ್ಯಾಯೋಚಿತ ಎಂದು ಪ್ರಶ್ನಿಸಿದ ದ್ಯಾಮನವ್ನವರ, ಇದೇ ವ್ಯವಸ್ಥೆ ಮುಂದುವರೆಸುವುದಾಗಿದ್ದರೆ ಔರಾದ್ಕರ್ ಸಮಿತಿ ರಚಿಸುವ ಔಚಿತ್ಯವೇನಿತ್ತು ಎಂದರು.