<p><strong>ಅಮೀನಗಡ</strong>: ಪಟ್ಟಣದಲ್ಲಿ ಪ್ರತಿ ಶನಿವಾರ ನಡೆಯುವ ಜಾನುವಾರು ಹಾಗೂ ಕುರಿ ಸಂತೆ ರಾಜ್ಯದಲ್ಲಿಯೇ ಹೆಸರುವಾಸಿ. ಕೋಟ್ಯಂತರ ರೂಪಾಯಿ ವ್ಯಾಪಾರ- ವಹಿವಾಟು ನಡೆದು ಸಾವಿರಾರು ಕುಟುಂಬಗಳಿಗೆ ಬದುಕು ಕಟ್ಟಿಕೊಟ್ಟಿದೆಯಲ್ಲದೇ ಇಲ್ಲಿ ಮಾರಾಟವಾಗುವ ಕುರಿ ಹಾಗೂ ಟಗರು ಮರಿಗಳಿಗೆ ವಿದೇಶದಲ್ಲೂ ಬೇಡಿಕೆ ಇದೆ.</p>.<p>ಸೋಮವಾರ ಬಕ್ರೀದ್ ನಿಮಿತ್ತ ಸಂತೆಯಲ್ಲಿ ಸಿಗುವ ಟಗರು ಮರಿಗಳಿಗೆ ಭಾರಿ ಬೇಡಿಕೆ ಕಂಡು ಬಂದಿತು.<br> ಈ ಸಂತೆಗೆ ರಾಜ್ಯದ ವಿವಿಧ ಮೂಲೆಗಳಿಂದ ಅಷ್ಟೇ ಅಲ್ಲದೆ ಹೊರರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ವ್ಯಾಪಾರಸ್ಥರೂ ವ್ಯಾಪಾರ ವಹಿವಾಟು ನಡೆಸಲು ಬರುತ್ತಾರೆ.</p>.<p>ಪಟ್ಟಣದ ಸಂತೆಯಲ್ಲಿ ಸಿಗುವ ಜವಾರಿ ತಳಿಯ ಕುರಿ ಹಾಗೂ ಟಗರು ಮರಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಬಿಟಲ್, ಮೌಳಿ, ಕೆಂಗುರಿ, ಬನ್ನೂರ ಹಾಗೂ ಶಿಯೋರಿ ತಳಿಯ ಕುರಿಗಳು ಹೆಚ್ಚು ಮಾರಾಟವಾಗುತ್ತವೆ.</p>.<p>ಅಂದಾಜು ₹ 5 ಕೋಟಿಗೂ ಹೆಚ್ಚು ವಹಿವಾಟು: ಬಕ್ರೀದ್ ನಿಮಿತ್ತ ಪ್ರತಿ ಶನಿವಾರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯವಲ್ಲದೇ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಿಂದ ಬಂದಿದ್ದ ಗ್ರಾಹಕರು ಹಾಗೂ ವ್ಯಾಪಾರಸ್ಥರು ಜವಾರಿ ತಳಿಯ ಮರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುವ ದೃಶ್ಯ ಕಂಡುಬಂದಿತು. ಹಬ್ಬದ ವಾರವಾದ್ದರಿಂದ ಅಂದಾಜು ₹ 5 ಕೋಟಿಗೂ ಹೆಚ್ಚು ವ್ಯಾಪಾರ -ವಹಿವಾಟು ಆಗಿರಬಹುದು ಎನ್ನುತ್ತಾರೆ ವ್ಯಾಪಾರಸ್ಥರು.</p>.<p><strong>ಜವಾರಿ ತಳಿಗೆ ಹೆಚ್ಚಿದ ಬೇಡಿಕೆ :</strong> ಈ ಬಾರಿ ಜವಾರಿ ತಳಿಯ ಮರಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಅದರಲ್ಲೂ ಬಿಳಿ ಮರಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು ₹ 10 ಸಾವಿರದಿಂದ ₹ 1 ಲಕ್ಷಕ್ಕೆ ಮಾರಾಟದ ಬೇಡಿಕೆ ಕಂಡುಬಂದಿತು.</p>.<p><strong>ಯೋಗ್ಯ ಬೆಲೆಗೆ ದೊರೆತ ಮರಿಗಳು</strong>: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮರಿಗಳು ಸಂತೆಯಲ್ಲಿ ಮಾರಾಟಕ್ಕೆ ಲಭ್ಯವಿದ್ದವು. ಯೋಗ್ಯ ಬೆಲೆಗೆ ಗ್ರಾಹಕರಿಗೆ ಲಭ್ಯವಾಗಿವೆ ಎನ್ನುತ್ತಾರೆ ಗ್ರಾಹಕರು.</p>.<div><blockquote>ಬಕ್ರೀದ್ ಸೋಮವಾರ ಇರುವುದರಿಂದ ಸಂತೆಯಲ್ಲಿ ಟಗರು ಹಾಗೂ ಕುರಿ ಮರಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಯೋಗ್ಯ ಬೆಲೆಗೆ ಮರಿಗಳನ್ನು ಮಾರಾಟ ಮಾಡಿದ್ದೇವೆ</blockquote><span class="attribution"> ಹನಮಂತ ಆಡಿನ ಲಾಯದಗುಂದಿ ಗ್ರಾಮದ ರೈತ</span></div>.<div><blockquote>ಅಮೀನಗಡದಲ್ಲಿ ಸಿಗುವ ಜವಾರಿ ತಳಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮರಿಗಳನ್ನು ಖರೀದಿಸಲು ಬೆಂಗಳೂರಿನಿಂದ ಬಂದಿದ್ದೇವೆ </blockquote><span class="attribution">ಸೋಹೆಲ್ ಬೆಂಗಳೂರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಮೀನಗಡ</strong>: ಪಟ್ಟಣದಲ್ಲಿ ಪ್ರತಿ ಶನಿವಾರ ನಡೆಯುವ ಜಾನುವಾರು ಹಾಗೂ ಕುರಿ ಸಂತೆ ರಾಜ್ಯದಲ್ಲಿಯೇ ಹೆಸರುವಾಸಿ. ಕೋಟ್ಯಂತರ ರೂಪಾಯಿ ವ್ಯಾಪಾರ- ವಹಿವಾಟು ನಡೆದು ಸಾವಿರಾರು ಕುಟುಂಬಗಳಿಗೆ ಬದುಕು ಕಟ್ಟಿಕೊಟ್ಟಿದೆಯಲ್ಲದೇ ಇಲ್ಲಿ ಮಾರಾಟವಾಗುವ ಕುರಿ ಹಾಗೂ ಟಗರು ಮರಿಗಳಿಗೆ ವಿದೇಶದಲ್ಲೂ ಬೇಡಿಕೆ ಇದೆ.</p>.<p>ಸೋಮವಾರ ಬಕ್ರೀದ್ ನಿಮಿತ್ತ ಸಂತೆಯಲ್ಲಿ ಸಿಗುವ ಟಗರು ಮರಿಗಳಿಗೆ ಭಾರಿ ಬೇಡಿಕೆ ಕಂಡು ಬಂದಿತು.<br> ಈ ಸಂತೆಗೆ ರಾಜ್ಯದ ವಿವಿಧ ಮೂಲೆಗಳಿಂದ ಅಷ್ಟೇ ಅಲ್ಲದೆ ಹೊರರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ವ್ಯಾಪಾರಸ್ಥರೂ ವ್ಯಾಪಾರ ವಹಿವಾಟು ನಡೆಸಲು ಬರುತ್ತಾರೆ.</p>.<p>ಪಟ್ಟಣದ ಸಂತೆಯಲ್ಲಿ ಸಿಗುವ ಜವಾರಿ ತಳಿಯ ಕುರಿ ಹಾಗೂ ಟಗರು ಮರಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಬಿಟಲ್, ಮೌಳಿ, ಕೆಂಗುರಿ, ಬನ್ನೂರ ಹಾಗೂ ಶಿಯೋರಿ ತಳಿಯ ಕುರಿಗಳು ಹೆಚ್ಚು ಮಾರಾಟವಾಗುತ್ತವೆ.</p>.<p>ಅಂದಾಜು ₹ 5 ಕೋಟಿಗೂ ಹೆಚ್ಚು ವಹಿವಾಟು: ಬಕ್ರೀದ್ ನಿಮಿತ್ತ ಪ್ರತಿ ಶನಿವಾರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯವಲ್ಲದೇ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಿಂದ ಬಂದಿದ್ದ ಗ್ರಾಹಕರು ಹಾಗೂ ವ್ಯಾಪಾರಸ್ಥರು ಜವಾರಿ ತಳಿಯ ಮರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುವ ದೃಶ್ಯ ಕಂಡುಬಂದಿತು. ಹಬ್ಬದ ವಾರವಾದ್ದರಿಂದ ಅಂದಾಜು ₹ 5 ಕೋಟಿಗೂ ಹೆಚ್ಚು ವ್ಯಾಪಾರ -ವಹಿವಾಟು ಆಗಿರಬಹುದು ಎನ್ನುತ್ತಾರೆ ವ್ಯಾಪಾರಸ್ಥರು.</p>.<p><strong>ಜವಾರಿ ತಳಿಗೆ ಹೆಚ್ಚಿದ ಬೇಡಿಕೆ :</strong> ಈ ಬಾರಿ ಜವಾರಿ ತಳಿಯ ಮರಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಅದರಲ್ಲೂ ಬಿಳಿ ಮರಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು ₹ 10 ಸಾವಿರದಿಂದ ₹ 1 ಲಕ್ಷಕ್ಕೆ ಮಾರಾಟದ ಬೇಡಿಕೆ ಕಂಡುಬಂದಿತು.</p>.<p><strong>ಯೋಗ್ಯ ಬೆಲೆಗೆ ದೊರೆತ ಮರಿಗಳು</strong>: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮರಿಗಳು ಸಂತೆಯಲ್ಲಿ ಮಾರಾಟಕ್ಕೆ ಲಭ್ಯವಿದ್ದವು. ಯೋಗ್ಯ ಬೆಲೆಗೆ ಗ್ರಾಹಕರಿಗೆ ಲಭ್ಯವಾಗಿವೆ ಎನ್ನುತ್ತಾರೆ ಗ್ರಾಹಕರು.</p>.<div><blockquote>ಬಕ್ರೀದ್ ಸೋಮವಾರ ಇರುವುದರಿಂದ ಸಂತೆಯಲ್ಲಿ ಟಗರು ಹಾಗೂ ಕುರಿ ಮರಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಯೋಗ್ಯ ಬೆಲೆಗೆ ಮರಿಗಳನ್ನು ಮಾರಾಟ ಮಾಡಿದ್ದೇವೆ</blockquote><span class="attribution"> ಹನಮಂತ ಆಡಿನ ಲಾಯದಗುಂದಿ ಗ್ರಾಮದ ರೈತ</span></div>.<div><blockquote>ಅಮೀನಗಡದಲ್ಲಿ ಸಿಗುವ ಜವಾರಿ ತಳಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮರಿಗಳನ್ನು ಖರೀದಿಸಲು ಬೆಂಗಳೂರಿನಿಂದ ಬಂದಿದ್ದೇವೆ </blockquote><span class="attribution">ಸೋಹೆಲ್ ಬೆಂಗಳೂರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>