ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಸ್ವಾಮೀಜಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜೋಡೆತ್ತುಗಳ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ 30ಕ್ಕೂ ಹೆಚ್ಚು ಜೋಡೆತ್ತುಗಳು ಭಾಗವಹಿಸಿದ್ದವು. ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರಗೇಶ ಕಡ್ಲಿಮಟ್ಟಿ, ಉದ್ಯಮಿ ವಿದ್ಯಾಧರ ಮಳ್ಳಿ, ಪಪಂ ಸದಸ್ಯ ಗುರುಲಿಂಗಪ್ಪ ಪಾಟೀಲ, ಹುಚ್ಚಪ್ಪ ಸಿಂಹಾಸನ, ಹುಚ್ಚಪ್ಪ ಶಿರಗುಂಪಿ, ಗಂಗಪ್ಪ ಭೂತಲ ಸೇರಿದಂತೆ ಅನೇಕರು ಇದ್ದರು.