‘ಈ ಭಾಗದಲ್ಲಿ ನೆರೆ ಬಂದ ವೇಳೆ ಸತೀಶ್ ರೆಡ್ಡಿ ಜನರೊಂದಿಗೆ ನಿಂತು ಅವರ ಕಷ್ಟಗಳಿಗೆ ಸ್ಪಂದಿಸಿದ ರೀತಿಯ ಬಗ್ಗೆ ಅಭಿಮಾನವಿದೆ. ರಾಜಕೀಯದಲ್ಲಿ ತೊಡಗಿಕೊಳ್ಳುತ್ತಿರುವ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ನನ್ನ ಈ ನಡೆಯ ಬಗ್ಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. ಚುನಾವಣೆಗಾಗಿ ಸತೀಶ್ ಜೊತೆ ಇದ್ದೇನೆ. ಆದರೆ, ಜನರಿಗೆ ಅನ್ಯಾಯವಾದಾಗ ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ’ ಎಂದು ಭರವಸೆ ನೀಡಿದರು.