ಕೋಲ್ಕತ್ತಾದಿಂದ ಮಾರ್ಚ್ 22ರಂದು ಬಾದಾಮಿಗೆ ಮರಳಿದ್ದ ಯುವಕನಿಗೆ ವಿಮಾನ ನಿಲ್ದಾಣದಲ್ಲಿ ಕೈಗೆ ಮುದ್ರೆ ಹಾಕಲಾಗಿತ್ತು. ಜೊತೆಗೆ ಪ್ರತ್ಯೇಕವಾಗಿ ಇರುವಂತೆ ಹೇಳಲಾಗಿತ್ತು. ಆದರೆ ಮನೆಯಲ್ಲಿ ಉಳಿಯದ ಯುವಕ ಸ್ನೇಹಿತರ ಜೊತೆ ಹೊರಗೆ ತಿರುಗಾಟ ನಡೆಸಿದ್ದನು. ಸಾಲದ್ದಕ್ಕೆ ಕೈ ಮೇಲೆ ಹಾಕಿದ್ದ ಮುದ್ರೆ ಅಳಿಸಿ ಹಾಕಲು ಪ್ರಯತ್ನಿಸಿದ್ದನು.