ಬಾಗಲಕೋಟೆ: ‘ತಮ್ಮ (ಮಾಧ್ಯಮದವರ) ಆಶಯ ಈಡೇರಿದರೆ ಮುಂದಿನ ಕೆಲವೇ ದಿನಗಳಲ್ಲಿ ನಾನು ಮುಖ್ಯಮಂತ್ರಿ ಆಗಬಹುದು’ ಎಂದುಅರಣ್ಯ, ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದ ಅವರು, ’ಜೀವಂತವಾಗಿದ್ದರೆ ಇದೇ ಅವಧಿ, ಸತ್ತರೆ ಮುಂದಿನ ಅವಧಿಗೆ ಸಿ.ಎಂ ಆಗಬಹುದು‘ ಎಂದು ಚಟಾಕಿ ಹಾರಿಸಿದರು.
‘ಬೆಳಗಾವಿ ಜಿಲ್ಲೆಯ ಉಸ್ತುವಾರಿ ಆಗುವ ಆಸೆ ಇದೆ. ಆಯಾ ಜಿಲ್ಲೆಯವರೇ ಉಸ್ತುವಾರಿ ಆಗಬಾರದು ಎಂಬುದು ಪಕ್ಷದ ನಿರ್ಧಾರವಾಗಿದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಯವರೇ ಆದಲ್ಲಿ ಒಳ್ಳೆಯದು. ಅಭಿವೃದ್ಧಿಗೆ ಅನುಕೂಲ’ ಎಂದು ಹೇಳಿದರು.