ಹರದೊಳ್ಳಿಯ ಭೀಮನಗೌಡ ಪಾಟೀಲ, ಕೋಟೆಕಲ್ನ ಕಲ್ಲಪ ರಾಮಣ್ಣ ಶಿರೂರ, ಸಬ್ಬಲಹುಣಸಿಯ ಮಲ್ಲಪ್ಪ ಕುರಿ ಮನೆತನದಲ್ಲಿ ಹೊಸ ಕೂರಿಗೆಯನ್ನು ಸಿದ್ದಪಡಿಸಿ ಅದಕ್ಕೆ ಸುಣ್ಣ ಬಣ್ಣ ಹಚ್ಚಿ, ಶೆಡ್ಡಿ ಬಟ್ಟಲ ಕಟ್ಟಿರುತ್ತಾರೆ. ಅದಕ್ಕೆ ರೇಷ್ಮೆಯ ಹಸಿರು ಸೀರೆ ತೊಡಿಸಿ, ಮಾವಿನ ತೊಳಲು ಕಟ್ಟಿ, ನೈವೇದ್ಯಕ್ಕೆ ಹೋಳಿಗೆ, ನುಚ್ಚು ಮಾಡಿ ಮುತ್ತೈದೆಯರು ಹಾಗೂ ಕುಟುಂಬದವರು ಸಿಡಿ ಕಾಳನ್ನು ಬಿಡುವ ಮೂಲಕ ಪೂಜೆ ಸಲ್ಲಿಸುವ ಶಾಸ್ತ್ರ ಇದಾಗಿದೆ.