<p><strong>ಕುಳಗೇರಿ ಕ್ರಾಸ್: </strong>ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಪಟ್ಟಣವನ್ನು ತಲುಪಲು ಹೆಬ್ಬಳ್ಳಿ ಹಾಗೂ ಸುತ್ತಮುತ್ತಲಿನ ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಬಹಳ ಮಹತ್ವದ ವ್ಯಾಪಾರಿ ಕೇಂದ್ರವನ್ನು ಸಂಪರ್ಕಿಸುವ ಬಾದಾಮಿ ತಾಲೂಕಿನ ಹೆಬ್ಬಳ್ಳಿ-ಜಕನೂರ ಮಾರ್ಗವಾಗಿ ಹದಗೆಟ್ಟಿದೆ.</p>.<p>ಪ್ರತಿ ಹತ್ತು ಅಡಿಗೆ ಒಂದು ತಗ್ಗು ನಿರ್ಮಾಣವಾಗಿದ್ದು, ಅನೇಕ ತಿಂಗಳುಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ‘ಪಟ್ಟಣದಿಂದ ಸುತ್ತುಮುತ್ತಲಿನ 25 ಕಿಮೀ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳ ರೈತರು ಬೆಳೆದ ಬೆಳೆಗಳ ಫಸಲನ್ನು ಈ ಮಾರುಕಟ್ಟೆಗೆ ಸಾಗಿಸಿ ವ್ಯಾಪಾರ ವಹಿವಾಟು ಮಾಡುವ ಒಂದು ಬೃಹತ್ ವ್ಯಾಪಾರಿ ಕೇಂದ್ರವಾಗಿದ್ದು, ರೈತರು ಬೆಳೆದ ಫಸಲನ್ನು ಟ್ರ್ಯಾಕ್ಟರ್ ಮೂಲಕ ಸಾಗಿಸುವ ವೇಳೆ ಈ ಬೃಹತ್ ತಗ್ಗು-ಗುಂಡಿಗಳಿಂದ ಟ್ರ್ಯಾಕ್ಟರ ಉರುಳಿ ಅವಘಡಗಳು ಸಂಭವಿಸಿ ರೈತರ ಫಸಲು ನೆಲಕಚ್ಚಿ ಹೋಗಿದ್ದು ಹಾಗೂ ಪ್ರಾಣವನ್ನು ಕಳೆದುಕೊಂಡಿದ್ದು ಇದೆ’ ಎಂದು ಗೋವನಕೊಪ್ಪ ಗ್ರಾಮದ ಪ್ರವೀಣ ಮೇಟಿ, ಲಕ್ಷ್ಮಣ ಹರಿಜನ ತಿಳಿಸಿದರು.</p>.<p>ಹೆಬ್ಬಳ್ಳಿ-ಜಕನೂರ ಮಾರ್ಗದಲ್ಲಿ ಆರು ಕಡೆಗಳಲ್ಲಿ ಮರಳು ಗಣಿಗಾರಿಕೆಗೆ ಪರವಾನಿಗೆ ನೀಡಲಾಗಿದೆ. ಈ ಭಾಗದ ರೈತರು ಹಾಗೂ ಪ್ರಯಾಣಿಕರು ಪ್ರಯಾಣಿಸುವುದು ಸವಾಲಾಗಿ ಪರಿಣಮಿಸಿದೆ. ಈ ರಸ್ತೆಯಲ್ಲಿ ಅಪಾರ ಪ್ರಮಾಣದ ಮರಳಿನ ಭಾರ ಹೊತ್ತ ಲಾರಿಗಳ ಓಡಾಟದಿಂದಾಗಿಯೇ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ. ಕೆಲವು ರೈತರಿಗೆ ಈ ರಸ್ತೆಯಲ್ಲಿ ಪ್ರಯಾಣಿಸದೆ ಬೇರೆ ಮಾರ್ಗವಿಲ್ಲದ ಸ್ಥಿತಿ ಇದೆ.</p>.<p>ಜಕನೂರ-ಮುಮ್ಮರಡ್ಡಿಕೊಪ್ಪ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಕಾಲೇಜು ವಿದ್ಯಾರ್ಥಿಗಳಿಗೆ ಸಾರಿಗೆ ಬಸ್ ವ್ಯವಸ್ಥೆಯಿಲ್ಲದೆ ಇರುವುದು, ವಿದ್ಯಾರ್ಥಿಗಳ ಪಾಲಕರು ಪ್ರತಿದಿನ ತಮ್ಮ ಮಕ್ಕಳನ್ನು ಬೈಕ್ ಮೂಲಕ ಕಾಲೇಜಿಗೆ ತಂದು ಬಿಡುವ ಪರಿಸ್ಥಿತಿಯೂ ಈ ಭಾಗದ ಜನರದ್ದಾಗಿದೆ.</p>.<p>ಹೆಬ್ಬಳಿ ಗ್ರಾಮದಿಂದ ಜಕನೂರ ಗ್ರಾಮಕ್ಕೆ ಆಟೊ ಮೂಲಕವೇ ಗ್ರಾಮಗಳನ್ನು ತಲುಪುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಕನೂರ ಗ್ರಾಮದ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪ್ರೌಢಶಾಲೆ-ಕಾಲೇಜುಗಳಿಗೆ ತೆರಳಲು ಆಟೊಗೆ ಹಣ ಕೊಟ್ಟು ಪ್ರಯಾಣಿಸುತ್ತಿದ್ದಾರೆ.</p>.<p>ಈ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸಿದಂತೆ ಆಟೊ ಚಾಲಕರು ಬಸ್ ಚಾಲಕರೊಂದಿಗೆ ಗಲಾಟೆ ನಡೆಸಿದ ಪ್ರಸಂಗಗಳು ಈ ಹಿಂದೆ ನಡೆದಿದೆ. </p>.<p>ಮಲಪ್ರಭಾ ನದಿ ಅಚ್ಚುಕಟ್ಟು ಪ್ರದೇಶಗಳ ಬಹುತೇಕ ಗ್ರಾಮಗಳ ರಸ್ತೆಗಳು ಹೆಚ್ಚಾಗಿ ಮರಳು ಗಣಿಗಾರಿಕೆಯಿಂದಲೇ ಹಾಳಾಗಿವೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಶಿವಾನಂದ ದುರೆ, ಬಸವರಾಜ ಜುನ್ನಾಳ, ಶಿವಾನಂದ ಕೊಪ್ಪದ, ಹನುಮಂತ ದೊಡ್ಡಮನಿ ಒತ್ತಾಯಿಸಿದರು.</p>.<div><blockquote>ಸರ್ಕಾರದಿಂದ ಡಿಎಂಎಫ್ ಫಂಡ್ ಬಿಡುಗಡೆಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು ಫಂಡ್ ಬಂದ ತಕ್ಷಣವೇ ಅಥವಾ ಸರ್ಕಾರದಿಂದ ಯಾವುದಾದರೂ ಅನುದಾನ ಬಂದ ಕೂಡಲೇ ಆದ್ಯತೆಯಿಂದ ರಸ್ತೆ ಕೆಲಸ ಮಾಡಲಾಗುವುದು </blockquote><span class="attribution">ಎ.ಎಸ್.ತೋಪಲಕಟ್ಟಿ ಜಿಪಂ ಎಇಇ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಳಗೇರಿ ಕ್ರಾಸ್: </strong>ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಪಟ್ಟಣವನ್ನು ತಲುಪಲು ಹೆಬ್ಬಳ್ಳಿ ಹಾಗೂ ಸುತ್ತಮುತ್ತಲಿನ ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಬಹಳ ಮಹತ್ವದ ವ್ಯಾಪಾರಿ ಕೇಂದ್ರವನ್ನು ಸಂಪರ್ಕಿಸುವ ಬಾದಾಮಿ ತಾಲೂಕಿನ ಹೆಬ್ಬಳ್ಳಿ-ಜಕನೂರ ಮಾರ್ಗವಾಗಿ ಹದಗೆಟ್ಟಿದೆ.</p>.<p>ಪ್ರತಿ ಹತ್ತು ಅಡಿಗೆ ಒಂದು ತಗ್ಗು ನಿರ್ಮಾಣವಾಗಿದ್ದು, ಅನೇಕ ತಿಂಗಳುಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ‘ಪಟ್ಟಣದಿಂದ ಸುತ್ತುಮುತ್ತಲಿನ 25 ಕಿಮೀ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳ ರೈತರು ಬೆಳೆದ ಬೆಳೆಗಳ ಫಸಲನ್ನು ಈ ಮಾರುಕಟ್ಟೆಗೆ ಸಾಗಿಸಿ ವ್ಯಾಪಾರ ವಹಿವಾಟು ಮಾಡುವ ಒಂದು ಬೃಹತ್ ವ್ಯಾಪಾರಿ ಕೇಂದ್ರವಾಗಿದ್ದು, ರೈತರು ಬೆಳೆದ ಫಸಲನ್ನು ಟ್ರ್ಯಾಕ್ಟರ್ ಮೂಲಕ ಸಾಗಿಸುವ ವೇಳೆ ಈ ಬೃಹತ್ ತಗ್ಗು-ಗುಂಡಿಗಳಿಂದ ಟ್ರ್ಯಾಕ್ಟರ ಉರುಳಿ ಅವಘಡಗಳು ಸಂಭವಿಸಿ ರೈತರ ಫಸಲು ನೆಲಕಚ್ಚಿ ಹೋಗಿದ್ದು ಹಾಗೂ ಪ್ರಾಣವನ್ನು ಕಳೆದುಕೊಂಡಿದ್ದು ಇದೆ’ ಎಂದು ಗೋವನಕೊಪ್ಪ ಗ್ರಾಮದ ಪ್ರವೀಣ ಮೇಟಿ, ಲಕ್ಷ್ಮಣ ಹರಿಜನ ತಿಳಿಸಿದರು.</p>.<p>ಹೆಬ್ಬಳ್ಳಿ-ಜಕನೂರ ಮಾರ್ಗದಲ್ಲಿ ಆರು ಕಡೆಗಳಲ್ಲಿ ಮರಳು ಗಣಿಗಾರಿಕೆಗೆ ಪರವಾನಿಗೆ ನೀಡಲಾಗಿದೆ. ಈ ಭಾಗದ ರೈತರು ಹಾಗೂ ಪ್ರಯಾಣಿಕರು ಪ್ರಯಾಣಿಸುವುದು ಸವಾಲಾಗಿ ಪರಿಣಮಿಸಿದೆ. ಈ ರಸ್ತೆಯಲ್ಲಿ ಅಪಾರ ಪ್ರಮಾಣದ ಮರಳಿನ ಭಾರ ಹೊತ್ತ ಲಾರಿಗಳ ಓಡಾಟದಿಂದಾಗಿಯೇ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ. ಕೆಲವು ರೈತರಿಗೆ ಈ ರಸ್ತೆಯಲ್ಲಿ ಪ್ರಯಾಣಿಸದೆ ಬೇರೆ ಮಾರ್ಗವಿಲ್ಲದ ಸ್ಥಿತಿ ಇದೆ.</p>.<p>ಜಕನೂರ-ಮುಮ್ಮರಡ್ಡಿಕೊಪ್ಪ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಕಾಲೇಜು ವಿದ್ಯಾರ್ಥಿಗಳಿಗೆ ಸಾರಿಗೆ ಬಸ್ ವ್ಯವಸ್ಥೆಯಿಲ್ಲದೆ ಇರುವುದು, ವಿದ್ಯಾರ್ಥಿಗಳ ಪಾಲಕರು ಪ್ರತಿದಿನ ತಮ್ಮ ಮಕ್ಕಳನ್ನು ಬೈಕ್ ಮೂಲಕ ಕಾಲೇಜಿಗೆ ತಂದು ಬಿಡುವ ಪರಿಸ್ಥಿತಿಯೂ ಈ ಭಾಗದ ಜನರದ್ದಾಗಿದೆ.</p>.<p>ಹೆಬ್ಬಳಿ ಗ್ರಾಮದಿಂದ ಜಕನೂರ ಗ್ರಾಮಕ್ಕೆ ಆಟೊ ಮೂಲಕವೇ ಗ್ರಾಮಗಳನ್ನು ತಲುಪುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಕನೂರ ಗ್ರಾಮದ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪ್ರೌಢಶಾಲೆ-ಕಾಲೇಜುಗಳಿಗೆ ತೆರಳಲು ಆಟೊಗೆ ಹಣ ಕೊಟ್ಟು ಪ್ರಯಾಣಿಸುತ್ತಿದ್ದಾರೆ.</p>.<p>ಈ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸಿದಂತೆ ಆಟೊ ಚಾಲಕರು ಬಸ್ ಚಾಲಕರೊಂದಿಗೆ ಗಲಾಟೆ ನಡೆಸಿದ ಪ್ರಸಂಗಗಳು ಈ ಹಿಂದೆ ನಡೆದಿದೆ. </p>.<p>ಮಲಪ್ರಭಾ ನದಿ ಅಚ್ಚುಕಟ್ಟು ಪ್ರದೇಶಗಳ ಬಹುತೇಕ ಗ್ರಾಮಗಳ ರಸ್ತೆಗಳು ಹೆಚ್ಚಾಗಿ ಮರಳು ಗಣಿಗಾರಿಕೆಯಿಂದಲೇ ಹಾಳಾಗಿವೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಶಿವಾನಂದ ದುರೆ, ಬಸವರಾಜ ಜುನ್ನಾಳ, ಶಿವಾನಂದ ಕೊಪ್ಪದ, ಹನುಮಂತ ದೊಡ್ಡಮನಿ ಒತ್ತಾಯಿಸಿದರು.</p>.<div><blockquote>ಸರ್ಕಾರದಿಂದ ಡಿಎಂಎಫ್ ಫಂಡ್ ಬಿಡುಗಡೆಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು ಫಂಡ್ ಬಂದ ತಕ್ಷಣವೇ ಅಥವಾ ಸರ್ಕಾರದಿಂದ ಯಾವುದಾದರೂ ಅನುದಾನ ಬಂದ ಕೂಡಲೇ ಆದ್ಯತೆಯಿಂದ ರಸ್ತೆ ಕೆಲಸ ಮಾಡಲಾಗುವುದು </blockquote><span class="attribution">ಎ.ಎಸ್.ತೋಪಲಕಟ್ಟಿ ಜಿಪಂ ಎಇಇ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>