ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ಎತ್ತುಗಳನ್ನು ಸಜ್ಜುಗೊಳಿಸುವ ಜೊತೆಗೆ ಹಬ್ಬದಲ್ಲಿ ಕಿಚ್ಚು ಹಾಯಿಸಿ ಕರಿ ಹರಿಯುವ ಕಾರಣ ಮುಂಜಾನೆಯೇ ಅವುಗಳ ಮೈ ತೊಳೆದು, ಕೋಡುಗಳಿಗೆ ಬಣ್ಣ ಬಳಿದು, ಬಣ್ಣ ಬಣ್ಣದ ಗೆಜ್ಜೆ ಸರ, ಲಡ್ಡು, ಹಣೆಕಟ್ಟು, ಮಗಡ, ಮೂಗುದಾರ, ಪಟಕಾಣಿ, ಗೊಂಡೆ, ಟೇಪುಗಳಿಂದ ಅಲಂಕರಿಸಲಾಗಿತ್ತು.
ಹಳೆಯ ಬಾಗಲಕೋಟೆಯ ವೆಂಕಟಪೇಟೆಯಿಂದ ಪೈಪೋಟಿ ಆರಂಭಿಸಿದ ಎತ್ತುಗಳು ವಲ್ಲಭಬಾಯ್ ಚೌಕದಲ್ಲಿ ಕರಿಹರಿದವು.