ಈ ಸಂದರ್ಭ ಪತ್ರಕರ್ತರ ಮಾತನಾಡಿದ ಅವರು ‘ವಾಲಿಬಾಲ್ ಆಡುವ ವಿಚಾರಕ್ಕೆ ನಡೆದ ಸಣ್ಣ ಗಲಾಟೆ ಇದಾಗಿದೆ. ಅದನ್ನೇ ನೆಪವಾಗಿಸಿಕೊಂಡು ಎಸ್ಐ ಹರೀಶ್ ಮನು ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ರಾಜಕೀಯವಾಗಿಯೂ ಮಾತುಗಳನ್ನಾಡಿದ್ದಾರೆ. ಇದೆಲ್ಲದರ ಧ್ವನಿಮುದ್ರಿಕೆಯೂ ಇದೆ. ಇದನ್ನು ಎಸ್ಪಿ ಅವರ ಗಮನಕ್ಕೆ ತಂದಿದ್ದೇನೆ’ ಎಂದು ತಿಳಿಸಿದರು.