ಆರೋಪಿಗಳು 2015ರ ಅಕ್ಟೋಬರ್ 7ರಂದು ನಗರದ ನಿವಾಸಿ ಎಚ್.ಎಂ. ಶಿವಶಂಕರ ಎಂಬುವರನ್ನು ಅಪಹರಿಸಿ, ಅವರ ಬಳಿಯಿದ್ದ ಚಿನ್ನದ ಉಂಗುರ, ಚೈನ್, ಮೊಬೈಲ್ ಹಾಗೂ ₹5,000 ನಗದು ಕಿತ್ತುಕೊಂಡು, ಬಳಿಕ ಕಟ್ಟಿಗೆ, ಕಲ್ಲುಗಳಿಂದ ಮನಬಂದಂತೆ ಹೊಡೆದು ಸಾಯಿಸಿದ್ದಾರೆ. ಗುರುತು ಸಿಗಬಾರದೆಂದು ಮುಖದ ಮೇಲೆ ಸೈಜ್ಗಲ್ಲು ಹಾಕಿ, ಬಳಿಕ ಬಂಡೆಗಲ್ಲು ಕಟ್ಟಿ ಮೃತದೇಹವನ್ನು ಚಿತ್ತವಾಡ್ಗಿ ಬಳಿಯ ತುಂಗಭದ್ರಾ ಜಲಾಶಯದ ಕಾಲುವೆಗೆ ಎಸೆದು ಹೋಗಿದ್ದರು.