ಮಾಲೀಕರು, ನಾಯಕರು: ಬಳ್ಳಾರಿ ಯೋಧರ ತಂಡವನ್ನು ರೆಡ್ಡಿ ಖರೀದಿಸಿದ್ದು, ಷಣ್ಮುಖ ನಾಯಕರಾಗಿದ್ದಾರೆ. ಮಂಜುನಾಥ ನಾಯಕರಾಗಿರುವ ಕೂಡ್ಲಿಗಿಟೈಗರ್ಸ್ ತಂಡವನ್ನು ಹೋಟೆಲ್ ಮಾಲೀಕ ಸೂರ್ಯಪ್ರಕಾಶ್ ಖರೀದಿಸಿದ್ದಾರೆ. ವಿ.ಪಂಪಾಪತಿ ನಾಯಕರಾಗಿರುವ ಕುರುಗೋಡು ಬುಲ್ಸ್ ತಂಡವನ್ನು ಪುರಸಭೆ ಸದಸ್ಯ ಎನ್.ನಾಗರಾಜ್, ಹನುಮಪ್ಪ ನಾಯಕರಾಗಿರುವ ಕುಡುತಿನಿ ವಿಎಲ್ಸಿ ತಂಡವನ್ನು ಉದ್ಯಮಿ ಈರೇಂದ್ರಪ್ರಸಾದ್, ಪುರುಷೋತ್ತಮ ನಾಯಕರಾಗಿರುವ ದಬಾಂಗ್ ಎಚ್ಬಿಹಳ್ಳಿ ತಂಡವನ್ನು ಪಟ್ಟಣ ಪಂಚಾಯ್ತಿ ಸದಸ್ಯ ವಿಷ್ಣುನಾಯ್ಕ್ ಖರೀದಿಸಿದ್ದಾರೆ. ದೊಡ್ಡಲಿಂಗಪ್ಪ ನಾಯಕತ್ವದ ಕಂಪ್ಲಿ ವಾರಿಯರ್ಸ್ ತಂಡವನ್ನು ಕಾಂಗ್ರೆಸ್ ಮುಖಂಡ ಸಿ.ಆರ್.ಹನುಮಂತ, ವೆಂಕಟೇಶ ನಾಯಕರಾದ ಕೊಟ್ಟೂರಿನ ಕಿಲ್ಲಿಂಗ್ ಟೈಗರ್ಸ್ ತಂಡವನ್ನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವೆಂಕಟೇಶ ನಾಯ್ಕ್ ಹಾಗೂ ಪ್ರದೀಪ್ ನಾಯಕರಾಗಿರುವ ವಿಜಯನಗರ ವೀರಾಸ್ ತಂಡವನ್ನು ಜೆ.ವಿನಾಯಕ ಖರೀದಿಸಿದ್ದಾರೆ’ ಎಂದು ಮಾಹಿತಿ ನೀಡಿದರು.