ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಮನಸೆಳೆದ ನಾಟಕ ಪ್ರದರ್ಶನ

Published 17 ಆಗಸ್ಟ್ 2023, 14:49 IST
Last Updated 17 ಆಗಸ್ಟ್ 2023, 14:49 IST
ಅಕ್ಷರ ಗಾತ್ರ

ಕಂಪ್ಲಿ: ಇಲ್ಲಿನ ವೀರಶೈವ ಭವನದಲ್ಲಿ ಕೊಪ್ಪಳದ ಕಲ್ಪುರ ಸಾಂಸ್ಕೃತಿಕ ಕಲಾ (ಕಲ್ಲೂರು) ಸಂಘದ ವತಿಯಿಂದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪಠ್ಯ ಆಧಾರಿತ ನಾಟಕಗಳಾದ ‘ಬೆಪ್ಪತಕ್ಕಡಿ ಬೋಳೆ ಶಂಕರ’ ಮತ್ತು ‘ಕೃಷ್ಣೆಗೌಡನ ಆನೆ’ ನಾಟಕಗಳು ವಿದ್ಯಾರ್ಥಿಗಳ ಮನಸೂರೆಗೊಂಡವು.

ಕಲಾವಿದರಾದ ಉಮೇಶ್ ಧಾರವಾಡ, ಬಿಜಾಪುರದ ಶಾಂಭವಿ, ಕುಮಾರ್, ಪರಶುರಾಮ, ಶಿವು ಕೂಡ್ಲಿಗಿ, ಕೊಪ್ಪಳದ ಮಂಗೇಶ್, ರೇಷ್ಮಾ, ಶರಣ, ಪ್ರವೀಣ್ ಇನ್ನಿತರರು ಮನೋಜ್ಞವಾಗಿ ಅಭಿನಯಿಸಿದರು.

ವೀರೇಶ್ ರಾಯಚೂರು, ಲಕ್ಷ್ಮಣ ನಿರ್ದೆಶನದಲ್ಲಿ, ಡಿ. ಸೂರಿ ನೃತ್ಯ ಸಂಯೋಜನೆ ಮತ್ತು ಶರಣಶೆಟ್ಟರ್ ಸಂಯೋಜನೆಯಲ್ಲಿ ನಾಟಕ ಪ್ರದರ್ಶನಗೊಂಡವು.

ಸಾಂಗಾತ್ರಯ ಸಂಸ್ಕೃತ ಪಾಠಶಾಲೆ ಅಧ್ಯಕ್ಷ ಎಸ್.ಎಸ್.ಎಂ. ಚನ್ನಯ್ಯಸ್ವಾಮಿ, ಮದರ್ ತೆರೇಸಾ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಬಿ.ಕೆ. ಜಡೆಪ್ಪ, ಉಪನ್ಯಾಸಕರಾದ ವಿಜಯಶಂಕರ್, ಬಸವರಾಜ, ರಾಜಾಸಾಬ್, ಖಾಸಿಂ, ಶಿವಾನಂದ್, ಸುರೇಶ್, ಭವಾನಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT