<p> ಕಂಪ್ಲಿ: ಇಲ್ಲಿನ ವೀರಶೈವ ಭವನದಲ್ಲಿ ಕೊಪ್ಪಳದ ಕಲ್ಪುರ ಸಾಂಸ್ಕೃತಿಕ ಕಲಾ (ಕಲ್ಲೂರು) ಸಂಘದ ವತಿಯಿಂದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪಠ್ಯ ಆಧಾರಿತ ನಾಟಕಗಳಾದ ‘ಬೆಪ್ಪತಕ್ಕಡಿ ಬೋಳೆ ಶಂಕರ’ ಮತ್ತು ‘ಕೃಷ್ಣೆಗೌಡನ ಆನೆ’ ನಾಟಕಗಳು ವಿದ್ಯಾರ್ಥಿಗಳ ಮನಸೂರೆಗೊಂಡವು.</p>.<p>ಕಲಾವಿದರಾದ ಉಮೇಶ್ ಧಾರವಾಡ, ಬಿಜಾಪುರದ ಶಾಂಭವಿ, ಕುಮಾರ್, ಪರಶುರಾಮ, ಶಿವು ಕೂಡ್ಲಿಗಿ, ಕೊಪ್ಪಳದ ಮಂಗೇಶ್, ರೇಷ್ಮಾ, ಶರಣ, ಪ್ರವೀಣ್ ಇನ್ನಿತರರು ಮನೋಜ್ಞವಾಗಿ ಅಭಿನಯಿಸಿದರು.</p>.<p>ವೀರೇಶ್ ರಾಯಚೂರು, ಲಕ್ಷ್ಮಣ ನಿರ್ದೆಶನದಲ್ಲಿ, ಡಿ. ಸೂರಿ ನೃತ್ಯ ಸಂಯೋಜನೆ ಮತ್ತು ಶರಣಶೆಟ್ಟರ್ ಸಂಯೋಜನೆಯಲ್ಲಿ ನಾಟಕ ಪ್ರದರ್ಶನಗೊಂಡವು.</p>.<p>ಸಾಂಗಾತ್ರಯ ಸಂಸ್ಕೃತ ಪಾಠಶಾಲೆ ಅಧ್ಯಕ್ಷ ಎಸ್.ಎಸ್.ಎಂ. ಚನ್ನಯ್ಯಸ್ವಾಮಿ, ಮದರ್ ತೆರೇಸಾ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಬಿ.ಕೆ. ಜಡೆಪ್ಪ, ಉಪನ್ಯಾಸಕರಾದ ವಿಜಯಶಂಕರ್, ಬಸವರಾಜ, ರಾಜಾಸಾಬ್, ಖಾಸಿಂ, ಶಿವಾನಂದ್, ಸುರೇಶ್, ಭವಾನಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p> ಕಂಪ್ಲಿ: ಇಲ್ಲಿನ ವೀರಶೈವ ಭವನದಲ್ಲಿ ಕೊಪ್ಪಳದ ಕಲ್ಪುರ ಸಾಂಸ್ಕೃತಿಕ ಕಲಾ (ಕಲ್ಲೂರು) ಸಂಘದ ವತಿಯಿಂದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪಠ್ಯ ಆಧಾರಿತ ನಾಟಕಗಳಾದ ‘ಬೆಪ್ಪತಕ್ಕಡಿ ಬೋಳೆ ಶಂಕರ’ ಮತ್ತು ‘ಕೃಷ್ಣೆಗೌಡನ ಆನೆ’ ನಾಟಕಗಳು ವಿದ್ಯಾರ್ಥಿಗಳ ಮನಸೂರೆಗೊಂಡವು.</p>.<p>ಕಲಾವಿದರಾದ ಉಮೇಶ್ ಧಾರವಾಡ, ಬಿಜಾಪುರದ ಶಾಂಭವಿ, ಕುಮಾರ್, ಪರಶುರಾಮ, ಶಿವು ಕೂಡ್ಲಿಗಿ, ಕೊಪ್ಪಳದ ಮಂಗೇಶ್, ರೇಷ್ಮಾ, ಶರಣ, ಪ್ರವೀಣ್ ಇನ್ನಿತರರು ಮನೋಜ್ಞವಾಗಿ ಅಭಿನಯಿಸಿದರು.</p>.<p>ವೀರೇಶ್ ರಾಯಚೂರು, ಲಕ್ಷ್ಮಣ ನಿರ್ದೆಶನದಲ್ಲಿ, ಡಿ. ಸೂರಿ ನೃತ್ಯ ಸಂಯೋಜನೆ ಮತ್ತು ಶರಣಶೆಟ್ಟರ್ ಸಂಯೋಜನೆಯಲ್ಲಿ ನಾಟಕ ಪ್ರದರ್ಶನಗೊಂಡವು.</p>.<p>ಸಾಂಗಾತ್ರಯ ಸಂಸ್ಕೃತ ಪಾಠಶಾಲೆ ಅಧ್ಯಕ್ಷ ಎಸ್.ಎಸ್.ಎಂ. ಚನ್ನಯ್ಯಸ್ವಾಮಿ, ಮದರ್ ತೆರೇಸಾ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಬಿ.ಕೆ. ಜಡೆಪ್ಪ, ಉಪನ್ಯಾಸಕರಾದ ವಿಜಯಶಂಕರ್, ಬಸವರಾಜ, ರಾಜಾಸಾಬ್, ಖಾಸಿಂ, ಶಿವಾನಂದ್, ಸುರೇಶ್, ಭವಾನಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>