ಕುಲಸಚಿವ ಎ. ಸುಬ್ಬಣ್ಣ ರೈ, ದೇವರ ದಾಸಿಮಯ್ಯ ಅಧ್ಯಯನ ಪೀಠದ ಸಂಚಾಲಕ ಗೋವಿಂದ, ಮುದನೂರ ಮಹಾಸಂಸ್ಥಾನ ಮಠದ ಈಶ್ವರಾನಂದ ಸ್ವಾಮಿ, ಮಠದ ಕಾರ್ಯದರ್ಶಿ ರಾಮಸ್ವಾಮಿ, ನೇಕಾರ ಸಮಾಜದ ಮುಖಂಡರಾದ ರವೀಂದ್ರ ಕಲಬುರ್ಗಿ, ಗೋ.ತಿಪ್ಪೇಶ್, ಕೆ.ಜಿ.ಲಕ್ಷ್ಮಿನಾರಾಯಣಪ್ಪ, ಜಿ.ರಮೇಶ್, ಕೆ.ವಿ.ಶೇಖರ್, ಹೊಸಪೇಟೆ ತಾಲ್ಲೂಕು ನೇಕಾರ ಸಂಘದ ಅಧ್ಯಕ್ಷ ಬಸವರಾಜ ನಾಲತ್ವಾಡ ಇದ್ದರು. ಅಶೋಕ್ ಹುಗ್ಗೆಣ್ಣನವರ ವಚನ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ರೇಣುಕಾ ಅವರು ತಂಬೂರಿ, ದೇವರಾಜ ಹಾಲಗೇರಿ ಅವರು ಹಾರ್ಮೋನಿಯಂ, ಮಲ್ಲಿಕಾರ್ಜುನ ಅವರು ತಬಲ ಸಾಥ್ ನೀಡಿದರು.