<p><strong>ಹೂವಿನಹಡಗಲಿ</strong>: ಕೃಷಿಯಲ್ಲಿ ಯಾಂತ್ರಿಕತೆ ಹೆಚ್ಚಾದಂತೆಲ್ಲ ಎತ್ತಿನ ಬೇಸಾಯ ಕಡಿಮೆಯಾಗುತ್ತಿದೆ. ದುಬಾರಿ ಗಳೇವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಲ್ಲಿನ ರೈತರೊಬ್ಬರು ಎಡೆಕುಂಟೆ ಸಾಧನ ಆವಿಷ್ಕಾರ ಮಾಡಿದ್ದಾರೆ.</p>.<p>ತಾಲ್ಲೂಕಿನ ಸೋಗಿ ಗ್ರಾಮದ ಯುವ ಕೃಷಿಕ ಶಿವಸಿಂಪಿಗರ ಅಜ್ಜಯ್ಯ ಅವರು ತಮ್ಮ ದ್ವಿಚಕ್ರ ವಾಹನದ ನಿರುಪಯುಕ್ತ ಎಂಜಿನ್ ಬಳಸಿಕೊಂಡು ಎಡೆಕುಂಟೆ ಹೊಡೆಯುವ ಸಾಧನ ತಯಾರಿಸಿದ್ದಾರೆ. ತಮ್ಮ ಹೊಲದ ಮೆಕ್ಕೆಜೋಳ ಬೆಳೆಯಲ್ಲಿ ಎಡೆಕುಂಟೆ ಯಂತ್ರ ಬಳಕೆ ಮಾಡಿ ಯಶಸ್ವಿಯಾಗಿದ್ದಾರೆ.</p>.<p>ಬೈಕ್ ನ ನಿರುಪಯುಕ್ತ ಎಂಜಿನ್ ಮತ್ತು ಚಾಸಿಗೆ ಚಕ್ರ, ಹ್ಯಾಂಡಲ್ ಜೋಡಿಸಿದ್ದಾರೆ. ಯಂತ್ರದ ನಿಯಂತ್ರಣಕ್ಕೆ ಬೇಕಾದ ರೀತಿಯ ಕಬ್ಬಿಣದ ಕಂಬಿ ವೆಲ್ಡ್ ಮಾಡಿಸಿದ್ದಾರೆ. ಇದಕ್ಕೆ ಎರಡು ಕುಂಟೆ ಜೋಡಿಸಿ ಯಂತ್ರದ ನೆರವಿನಿಂದ ಎಡೆ ಹೊಡೆಯಲಾಗುತ್ತಿದೆ.</p>.<p>‘ಕೃಷಿಯಲ್ಲಿ ಟ್ರ್ಯಾಕ್ಟರ್ ಬಳಕೆ ಹೆಚ್ಚಿದಂತೆಲ್ಲ ಎತ್ತುಗಳ ಬೇಸಾಯ ಕಡಿಮೆಯಾಗಿದೆ. ಲಭ್ಯವಿದ್ದರೂ ಎತ್ತಿನ ಗಳೇವು ದುಬಾರಿಯಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗುಜರಿ ಸೇರಬೇಕಿದ್ದ ಎಂಜಿನ್ ಉಪಯೋಗಿಸಿಕೊಂಡು ಎಡೆಕುಂಟೆ ಸಾಧನೆ ಮಾಡಿಕೊಂಡಿರುವೆ. ಮೂರು ಎಕರೆ ಮೆಕ್ಕೆಜೋಳವನ್ನು ಈ ಸಾಧನದಿಂದಲೇ ಎಡೆ ಹೊಡೆದಿದ್ದೇವೆ. ಒಂದು ಲೀಟರ್ ಪೆಟ್ರೋಲ್ ನಲ್ಲಿ ಒಂದು ಎಕರೆ ಎಡೆಕುಂಟೆ ಹೊಡೆಯಬಹುದು’ ಎಂದು ಅಜ್ಜಯ್ಯ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ</strong>: ಕೃಷಿಯಲ್ಲಿ ಯಾಂತ್ರಿಕತೆ ಹೆಚ್ಚಾದಂತೆಲ್ಲ ಎತ್ತಿನ ಬೇಸಾಯ ಕಡಿಮೆಯಾಗುತ್ತಿದೆ. ದುಬಾರಿ ಗಳೇವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಲ್ಲಿನ ರೈತರೊಬ್ಬರು ಎಡೆಕುಂಟೆ ಸಾಧನ ಆವಿಷ್ಕಾರ ಮಾಡಿದ್ದಾರೆ.</p>.<p>ತಾಲ್ಲೂಕಿನ ಸೋಗಿ ಗ್ರಾಮದ ಯುವ ಕೃಷಿಕ ಶಿವಸಿಂಪಿಗರ ಅಜ್ಜಯ್ಯ ಅವರು ತಮ್ಮ ದ್ವಿಚಕ್ರ ವಾಹನದ ನಿರುಪಯುಕ್ತ ಎಂಜಿನ್ ಬಳಸಿಕೊಂಡು ಎಡೆಕುಂಟೆ ಹೊಡೆಯುವ ಸಾಧನ ತಯಾರಿಸಿದ್ದಾರೆ. ತಮ್ಮ ಹೊಲದ ಮೆಕ್ಕೆಜೋಳ ಬೆಳೆಯಲ್ಲಿ ಎಡೆಕುಂಟೆ ಯಂತ್ರ ಬಳಕೆ ಮಾಡಿ ಯಶಸ್ವಿಯಾಗಿದ್ದಾರೆ.</p>.<p>ಬೈಕ್ ನ ನಿರುಪಯುಕ್ತ ಎಂಜಿನ್ ಮತ್ತು ಚಾಸಿಗೆ ಚಕ್ರ, ಹ್ಯಾಂಡಲ್ ಜೋಡಿಸಿದ್ದಾರೆ. ಯಂತ್ರದ ನಿಯಂತ್ರಣಕ್ಕೆ ಬೇಕಾದ ರೀತಿಯ ಕಬ್ಬಿಣದ ಕಂಬಿ ವೆಲ್ಡ್ ಮಾಡಿಸಿದ್ದಾರೆ. ಇದಕ್ಕೆ ಎರಡು ಕುಂಟೆ ಜೋಡಿಸಿ ಯಂತ್ರದ ನೆರವಿನಿಂದ ಎಡೆ ಹೊಡೆಯಲಾಗುತ್ತಿದೆ.</p>.<p>‘ಕೃಷಿಯಲ್ಲಿ ಟ್ರ್ಯಾಕ್ಟರ್ ಬಳಕೆ ಹೆಚ್ಚಿದಂತೆಲ್ಲ ಎತ್ತುಗಳ ಬೇಸಾಯ ಕಡಿಮೆಯಾಗಿದೆ. ಲಭ್ಯವಿದ್ದರೂ ಎತ್ತಿನ ಗಳೇವು ದುಬಾರಿಯಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗುಜರಿ ಸೇರಬೇಕಿದ್ದ ಎಂಜಿನ್ ಉಪಯೋಗಿಸಿಕೊಂಡು ಎಡೆಕುಂಟೆ ಸಾಧನೆ ಮಾಡಿಕೊಂಡಿರುವೆ. ಮೂರು ಎಕರೆ ಮೆಕ್ಕೆಜೋಳವನ್ನು ಈ ಸಾಧನದಿಂದಲೇ ಎಡೆ ಹೊಡೆದಿದ್ದೇವೆ. ಒಂದು ಲೀಟರ್ ಪೆಟ್ರೋಲ್ ನಲ್ಲಿ ಒಂದು ಎಕರೆ ಎಡೆಕುಂಟೆ ಹೊಡೆಯಬಹುದು’ ಎಂದು ಅಜ್ಜಯ್ಯ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>