ರೈತ ಕಾರ್ಮಿಕ ದಲಿತರ ಐಕ್ಯ ಹೋರಾಟ ಸಮಿತಿಯಿಂದ ಹೊಸಪೇಟೆ ಬಂದ್ ನಿಮಿತ್ತ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಆನಂದ್ ಸಿಂಗ್ ಶಾಸಕರಾದ ನಂತರ ಒಮ್ಮೆಯೂ ವಿಧಾನಸಭೆಯಲ್ಲಿ ರೈತರ ಪರ, ಐಎಸ್ಆರ್ ಸಕ್ಕರೆ ಕಾರ್ಖಾನೆ ಆರಂಭಿಸುವ ಕುರಿತು ಮಾತನಾಡಿಲ್ಲ. ಆರೋಗ್ಯ ಸಚಿವ ಶ್ರೀರಾಮುಲು ಕೂಡ ಅಷ್ಟೇ. ಈ ಹಿಂದೆ ಅವರು ಸಂಸದರಾಗಿದ್ದರು. ಆದರೆ, ಒಮ್ಮೆಯೂ ಸಂಸತ್ತಿನಲ್ಲಿ ರೈತರ ಪರ ಮಾತನಾಡಿಲ್ಲ. ಆದರೆ, ಸ್ಥಳೀಯವಾಗಿ ರೈತರು ಹೋರಾಟ ನಡೆಸಿದರೆ ಅದರಲ್ಲಿ ಇಬ್ಬರು ಪಾಲ್ಗೊಳ್ಳುತ್ತಿದ್ದರು. ರೈತರ ಪರ ಇದ್ದೇವೆ ಎಂದು ಹೇಳುತ್ತಿದ್ದರು. ರೈತರನ್ನು ತೋರಿಸಿ ರಾಜಕೀಯ ಮಾಡುವವರ ಬಣ್ಣ ಬಯಲು ಮಾಡಬೇಕಿದೆ’ ಎಂದರು.