ಪ್ರಾಯೋಜಕತ್ವದ ಯೋಜನೆಯಡಿ ಎರಡೆರಡು ಕಾರ್ಯಕ್ರಮಗಳನ್ನು ಪಡೆದ ಕಲಾವಿದರಿಂದ ಸಿದ್ದಲಿಂಗೇಶ್ ರಂಗಣ್ಣವರ ₹ 10 ಸಾವಿರ ಲಂಚಕ್ಕೆ ಬೇಡಿಕೆ ಇಡುತ್ತಾರೆ. ಇಲಾಖೆಯ ಜಂಟಿ ನಿರ್ದೇಶಕರಿಗೆ ಹಣ ತಲುಪಿಸಬೇಕು. ಹೀಗಾಗಿ, ಎರಡೆರಡು ಕಾರ್ಯಕ್ರಮ ಪಡೆದವರಿಂದ ಹಣ ಕೊಡಿಸುವಂತೆ ಕಲಾವಿದರೊಬ್ಬರನ್ನು ಮೊಬೈಲ್ನಲ್ಲಿ ಕೇಳಿದ್ದಾರೆ ಎನ್ನಲಾದ ಸಂಭಾಷಣೆ ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.