ಅಭಿವೃದ್ಧಿ: ಹೊಸ ರೈಲು ಮಾರ್ಗಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ತುಂಗಭದ್ರಾ ಸೇತುವೆ ದುರಸ್ತಿ, ಕೇಂದ್ರ ರಸ್ತೆ ನಿಧಿಯ ಸಮರ್ಪಕ ಬಳಕೆ, ರುರ್ಬನ್ ಯೋಜನೆಯನ್ನು ಕ್ಷೇತ್ರದ 10 ಗ್ರಾಮ ಪಂಚಾಯ್ತಿಗಳಿಗೆ ವಿಸ್ತರಿಸುವುದು, ಬಳ್ಳಾರಿ–ಹೊಸಪೇಟೆಯನ್ನು ಸ್ಮಾರ್ಟ್ ಸಿಟಿಗಳನ್ನಾಗಿಸುವುದು, ಬಳ್ಳಾರಿಯಲ್ಲಿ ಇಂಧನ ಡಿಪೋ ಸ್ಥಾಪನೆ, ಗಣಿ ಸಂತ್ರಸ್ತರ ಅಭಿವೃದ್ಧಿ, ಜವಳಿ ಪಾರ್ಕ್ ಸ್ಥಾಪನೆಯಂಥ ಕಾರ್ಯಗಳು ನಡೆಯಬೇಕಾಗಿವೆ. ಉಗ್ರಪ್ಪ ಆಯ್ಕೆಯಾದರೆ ಇವೆಲ್ಲವೂ ಸಾಧ್ಯವಾಗುತ್ತದೆ’ ಎಂದು ಅವರು ಪ್ರತಿಪಾದಿಸಿದರು.