ಇಲ್ಲಿನ ಬಸವ ಭವನದಲ್ಲಿ ಭಾನುವಾರ ನಡೆದ ಬಣಜಿಗ ಸಮಾಜದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಜಗದೀಶ್ ಶೆಟ್ಟರ್ಗೆ ಆದ ಅನ್ಯಾಯ ಎಲ್ಲರಿಗೂ ಗೊತ್ತಿದೆ. ನೀವು ಚುನಾವಣೆಯಲ್ಲಿ ಕೊಟ್ಟ ಉತ್ತರ ಯಾರಿಗೆ ತಲುಪಬೇಕೋ ಅವರಿಗೆ ತಲುಪಿದೆ. ನಿಮ್ಮ ಹೊಡೆತವನ್ನು ಅವರು (ಬಿಜೆಪಿ ನಾಯಕರು) ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.