<p><strong>ಸಿರುಗುಪ್ಪ</strong>: ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ತಾಲ್ಲೂಕಿನ ಎಂಟಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಹುಳು ತಿಂದ ಗೋಧಿ ಮತ್ತು ಇತರ ಆಹಾರ ಧಾನ್ಯ ಪೂರೈಸಲಾಗಿದೆ. </p>.<p>ಕಳಪೆ ದರ್ಜೆಯ ಗೋಧಿಯನ್ನು ಬಳಸಿದರೆ ಮಕ್ಕಳ ಆರೋಗ್ಯ ಹದಗೆಡಬಹುದು ಎಂದು ಶಿಕ್ಷಕರು ಅದನ್ನು ಬಳಸಿರಲಿಲ್ಲ. ವಾಪಸು ತೆಗೆದುಕೊಂಡು ಹೋಗಲು ತಿಳಿಸಿದರೂ ಪೂರೈಕೆದಾರರು ಕ್ರಮ ವಹಿಸಿಲ್ಲ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.</p>.<p>ಶನಿವಾರ ಶಾಲೆಗಳಲ್ಲಿ ಉಪ್ಪಿಟ್ಟು, ಪಾಯಸ ಮಾಡಲಾಗುತ್ತದೆ. ಇದಕ್ಕಾಗಿ ಡಿಸೆಂಬರ್ ತಿಂಗಳಲ್ಲಿ ಪೂರೈಸಿದ್ದ ಗೋಧಿ ಹುಳು ಹಿಡಿದಿದ್ದು, ವಾಸನೆ ಬರುತ್ತಿದೆ. ಕಳಪೆ ಗೋಧಿ ಪೂರೈಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.</p>.<p>ಸದ್ಯ ಶಾಲೆಗಳಿಗೆ ಪೂರೈಕೆಯಾಗಿರುವ ಹುಳು ಬಿದ್ದಿರುವ ಹಾಗೂ ಮುಗ್ಗಲು ಗೋಧಿಯನ್ನು ಬಳಸದಂತೆ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರಿಗೆ ಸೂಚನೆ ನೀಡಲಾಗುವುದು ಎಂದು ಸಿರುಗುಪ್ಪ ಬಿಇಒ ಎಚ್.ಗುರಪ್ಪ ಅವರು ತಿಳಿಸಿದ್ದಾರೆ.</p>.<div><blockquote>ಗುತ್ತಿಗೆದಾರರು ಕೆಲ ಶಾಲೆಗಳಿಗೆ ಕಳಪೆ ಗುಣ್ಣಮಟ್ಟದ ಗೋಧಿ ಪೂರೈಸಿರುವುದು ಗಮನಕ್ಕೆ ಬಂದಿದೆ. ಅದನ್ನು ವಾಪಸು ಪಡೆಯಲಾಗುವುದು </blockquote><span class="attribution">ಜಾಫರ್ ಷರೀಪ್ ಸಹಾಯಕ ನಿರ್ದೇಶಕ ತಾಲ್ಲೂಕು ಅಕ್ಷರ ದಾಸೋಹ ಇಲಾಖೆ ಸಿರುಗುಪ್ಪ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರುಗುಪ್ಪ</strong>: ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ತಾಲ್ಲೂಕಿನ ಎಂಟಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಹುಳು ತಿಂದ ಗೋಧಿ ಮತ್ತು ಇತರ ಆಹಾರ ಧಾನ್ಯ ಪೂರೈಸಲಾಗಿದೆ. </p>.<p>ಕಳಪೆ ದರ್ಜೆಯ ಗೋಧಿಯನ್ನು ಬಳಸಿದರೆ ಮಕ್ಕಳ ಆರೋಗ್ಯ ಹದಗೆಡಬಹುದು ಎಂದು ಶಿಕ್ಷಕರು ಅದನ್ನು ಬಳಸಿರಲಿಲ್ಲ. ವಾಪಸು ತೆಗೆದುಕೊಂಡು ಹೋಗಲು ತಿಳಿಸಿದರೂ ಪೂರೈಕೆದಾರರು ಕ್ರಮ ವಹಿಸಿಲ್ಲ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.</p>.<p>ಶನಿವಾರ ಶಾಲೆಗಳಲ್ಲಿ ಉಪ್ಪಿಟ್ಟು, ಪಾಯಸ ಮಾಡಲಾಗುತ್ತದೆ. ಇದಕ್ಕಾಗಿ ಡಿಸೆಂಬರ್ ತಿಂಗಳಲ್ಲಿ ಪೂರೈಸಿದ್ದ ಗೋಧಿ ಹುಳು ಹಿಡಿದಿದ್ದು, ವಾಸನೆ ಬರುತ್ತಿದೆ. ಕಳಪೆ ಗೋಧಿ ಪೂರೈಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.</p>.<p>ಸದ್ಯ ಶಾಲೆಗಳಿಗೆ ಪೂರೈಕೆಯಾಗಿರುವ ಹುಳು ಬಿದ್ದಿರುವ ಹಾಗೂ ಮುಗ್ಗಲು ಗೋಧಿಯನ್ನು ಬಳಸದಂತೆ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರಿಗೆ ಸೂಚನೆ ನೀಡಲಾಗುವುದು ಎಂದು ಸಿರುಗುಪ್ಪ ಬಿಇಒ ಎಚ್.ಗುರಪ್ಪ ಅವರು ತಿಳಿಸಿದ್ದಾರೆ.</p>.<div><blockquote>ಗುತ್ತಿಗೆದಾರರು ಕೆಲ ಶಾಲೆಗಳಿಗೆ ಕಳಪೆ ಗುಣ್ಣಮಟ್ಟದ ಗೋಧಿ ಪೂರೈಸಿರುವುದು ಗಮನಕ್ಕೆ ಬಂದಿದೆ. ಅದನ್ನು ವಾಪಸು ಪಡೆಯಲಾಗುವುದು </blockquote><span class="attribution">ಜಾಫರ್ ಷರೀಪ್ ಸಹಾಯಕ ನಿರ್ದೇಶಕ ತಾಲ್ಲೂಕು ಅಕ್ಷರ ದಾಸೋಹ ಇಲಾಖೆ ಸಿರುಗುಪ್ಪ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>