ಕಾನಹೊಸಹಳ್ಳಿ: ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್.ಸಿ.ಮಹದೇವಪ್ಪ ಅವರ ಸೇವೆ ರಾಜ್ಯಕ್ಕೆ ಅಗತ್ಯವಿದ್ದು, ಅವರನ್ನು ಕೇಂದ್ರಕ್ಕೆ ಕಳುಹಿಸದೆ ರಾಜ್ಯದಲ್ಲಿಯೇ ಅವರ ಸೇವೆಯನ್ನು ಮುಂದುವರೆಸಬೇಕು ಎಂದು ಛಲವಾದಿ ಮಹಾಸಭದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಮಾರಪ್ಪ ಒತ್ತಾಯಿಸಿದರು.
ಪಟ್ಟಣದಲ್ಲಿ ಮಂಗಳವಾರ ನಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ಎಚ್.ಸಿ.ಮಹಾದೇವಪ್ಪ ಅವರ ಸೇವೆ ರಾಜ್ಯದ ದೀನ, ದಲಿತರ, ಶೋಷಿತರ ಏಳ್ಗೆಗಾಗಿ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಅವರಿಗೆ ಲೋಕಸಭಾ ಟಿಕೆಟ್ ನೀಡಿ ಕೇಂದ್ರಕ್ಕೆ ಕಳುಹಿಸಬೇಡಿ, ಸಚಿವ ಸ್ಥಾನದಲ್ಲೇ ಮುಂದುವರಿಸಿ ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಆಲೂರು ಲೋಕೇಶ್, ಗೌರವಾಧ್ಯಕ್ಷ ಸಿ.ಮಹಾಲಿಂಗಪ್ಪ, ಖಜಾಂಚಿ ಸಿ.ಪ್ರಕಾಶ್, ಸದಸ್ಯರಾದ ಸಿ.ಅಶ್ವತ್ಥ, ಇಮಡಾಪುರ ಎ.ಇ.ರಾಮಾಂಜಿನಿ, ಸಿ.ಈರಣ್ಣ, ಗುಂಡುಮುಣುಗು ಸಿದ್ದಪ್ಪ, ಬೆಳ್ಳೆಕಟ್ಟೆ ಶಶಿಧರ ಇತರರಿದ್ದರು.