ಕೇರಳದ ಕಣ್ಣೂರಿನ ಅನುವಾದಕ ಸುಧಾಕರನ್ ರಾಮಂತಳಿ ಅವರಿಗೆ ಪ್ರಸಕ್ತ ಸಾಲಿನ ‘ಕಣ್ಮಾಲಾ ಕಣ್ಮಣಿ’ ಪ್ರಶಸ್ತಿ, ₹10 ಸಾವಿರ ನಗದು ನೀಡಿ ಸಚಿವರು ಗೌರವಿಸಿದರು. ಅಸೋಸಿಯೇಶನ್ ಅಧ್ಯಕ್ಷ ಎಂ.ಕೆ. ಮಥಾಯ್, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ, ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕೆ. ಮೋಹನ್ ಕುಂಟಾರ್, ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪಿ. ಸುಂದರನ್, ಕಾರ್ಯದರ್ಶಿ ಮನೋಹರ್ ಪಿಲ್ಲೈ, ಕಾರ್ಯಕಾರಿ ಸಮಿತಿ ಸದಸ್ಯ ದೇವದಾಸ್ ಇದ್ದರು.