<p><strong>ಕಂಪ್ಲಿ</strong>: ತಾಲ್ಲೂಕಿನ ಚಿಕ್ಕಜಾಯಿಗನೂರು ಸಮೀಪದ ಸಂಚಯ್ಯಕ್ಯಾಂಪ್ ಬಳಿಯ ಗದ್ದೆಯಲ್ಲಿ ಹಸಿರು ಆಹಾರವಾದ ಪಿಳ್ಳೆ ಪೆಸರು ಸೇವಿಸಿ ಅಸ್ವಸ್ಥಗೊಂಡಿದ್ದ 40 ಕುರಿಗಳಲ್ಲಿ 8 ಕುರಿಗಳು ಮಂಗಳವಾರ ಮೃತಪಟ್ಟಿವೆ.</p>.<p>ಬೆಳಗಾವಿ ಮೂಲದ ಸಂಚಾರಿ ಕುರಿಗಾರರಾದ ಚಿಂಗಳಿ ಮಾಳಪ್ಪನ 4 ಕುರಿ, ಚಿಂಗಳಿ ಶಿವಪ್ಪನ 3 ಕುರಿ ಮತ್ತು ವೀರೇಶನ 1ಕುರಿ ಸತ್ತಿವೆ.</p>.<p>ವೆಂಕಟರಾಮಪ್ಪ ಗದ್ದೆಯಲ್ಲಿ ಬೀಡು ಬಿಟ್ಟಿದ್ದ ಕುರಿಗಳು ಹಸಿರು ಆಹಾರವಾದ ಪಿಳ್ಳೆ ಪೆಸರು ಅನ್ನು 40 ಕುರಿಗಳು ಮಿತಿಮೀರಿ ಸೇವಿಸಿದ್ದರಿಂದ 40 ಕುರಿಗಳ ಹೊಟ್ಟೆ ಉಬ್ಬಿ ಅಸ್ವಸ್ಥಗೊಂಡಿದ್ದವು. ತಕ್ಷಣ ಔಷಧೋಪಚಾರ ಮಾಡಿದ್ದರಿಂದ 32 ಕುರಿಗಳ ಆರೋಗ್ಯದಲ್ಲಿ ಸುಧಾರಣೆ ಕಂಡುಬಂತು.</p>.<p>ಆದರೆ, 8ಕುರಿಗಳು ಮೃತಪಟ್ಟವು. ಪ್ರತಿ ಕುರಿ ಮೌಲ್ಯ ₹ 15 ಸಾವಿರ ಎಂದು ಕುರಿಗಾರರು ಅಸಮಾಧಾನದಿಂದ ತಿಳಿಸಿದರು. ಸತ್ತ ಕುರಿಗಳಿಗೆ ಪರಿಹಾರ ನೀಡುವಂತೆಯೂ ಮನವಿ ಮಾಡಿದರು.</p>.<p>ಮೆಟ್ರಿ ಗ್ರಾಮದ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಡಾ.ಪ್ರದೀಪ್ಕುಮಾರ್, ಪಶು ವೈದ್ಯ ಪರೀಕ್ಷಕ ಕೆ.ಮಂಜುನಾಥ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಸತ್ತ ಕುರಿಗಳನ್ನು ಪರಿಶೀಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂಪ್ಲಿ</strong>: ತಾಲ್ಲೂಕಿನ ಚಿಕ್ಕಜಾಯಿಗನೂರು ಸಮೀಪದ ಸಂಚಯ್ಯಕ್ಯಾಂಪ್ ಬಳಿಯ ಗದ್ದೆಯಲ್ಲಿ ಹಸಿರು ಆಹಾರವಾದ ಪಿಳ್ಳೆ ಪೆಸರು ಸೇವಿಸಿ ಅಸ್ವಸ್ಥಗೊಂಡಿದ್ದ 40 ಕುರಿಗಳಲ್ಲಿ 8 ಕುರಿಗಳು ಮಂಗಳವಾರ ಮೃತಪಟ್ಟಿವೆ.</p>.<p>ಬೆಳಗಾವಿ ಮೂಲದ ಸಂಚಾರಿ ಕುರಿಗಾರರಾದ ಚಿಂಗಳಿ ಮಾಳಪ್ಪನ 4 ಕುರಿ, ಚಿಂಗಳಿ ಶಿವಪ್ಪನ 3 ಕುರಿ ಮತ್ತು ವೀರೇಶನ 1ಕುರಿ ಸತ್ತಿವೆ.</p>.<p>ವೆಂಕಟರಾಮಪ್ಪ ಗದ್ದೆಯಲ್ಲಿ ಬೀಡು ಬಿಟ್ಟಿದ್ದ ಕುರಿಗಳು ಹಸಿರು ಆಹಾರವಾದ ಪಿಳ್ಳೆ ಪೆಸರು ಅನ್ನು 40 ಕುರಿಗಳು ಮಿತಿಮೀರಿ ಸೇವಿಸಿದ್ದರಿಂದ 40 ಕುರಿಗಳ ಹೊಟ್ಟೆ ಉಬ್ಬಿ ಅಸ್ವಸ್ಥಗೊಂಡಿದ್ದವು. ತಕ್ಷಣ ಔಷಧೋಪಚಾರ ಮಾಡಿದ್ದರಿಂದ 32 ಕುರಿಗಳ ಆರೋಗ್ಯದಲ್ಲಿ ಸುಧಾರಣೆ ಕಂಡುಬಂತು.</p>.<p>ಆದರೆ, 8ಕುರಿಗಳು ಮೃತಪಟ್ಟವು. ಪ್ರತಿ ಕುರಿ ಮೌಲ್ಯ ₹ 15 ಸಾವಿರ ಎಂದು ಕುರಿಗಾರರು ಅಸಮಾಧಾನದಿಂದ ತಿಳಿಸಿದರು. ಸತ್ತ ಕುರಿಗಳಿಗೆ ಪರಿಹಾರ ನೀಡುವಂತೆಯೂ ಮನವಿ ಮಾಡಿದರು.</p>.<p>ಮೆಟ್ರಿ ಗ್ರಾಮದ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಡಾ.ಪ್ರದೀಪ್ಕುಮಾರ್, ಪಶು ವೈದ್ಯ ಪರೀಕ್ಷಕ ಕೆ.ಮಂಜುನಾಥ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಸತ್ತ ಕುರಿಗಳನ್ನು ಪರಿಶೀಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>