ಕುಂಬಾರ ಮನೆತನದ ಬಸಮ್ಮನವರು ಹಿರಿಯರಿಂದ ಬಳುವಳಿಯಾಗಿ ಬಂದ ಮಡಿಕೆ, ಮಣ್ಣೆತ್ತು ತಯಾರಿಸಿ, ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಈಗ ಅವರ ಕೆಲಸಕ್ಕೆ ಮೊಮ್ಮಗ ಮಹೇಂದ್ರ ಕೂಡ ಕೈಜೋಡಿಸಿದ್ದಾನೆ. ಅಷ್ಟೇ ಅಲ್ಲ, ಸದ್ಯ ಪಿ.ಯು.ಸಿ. ಓದುತ್ತಿರುವ ಮಹೇಂದ್ರ, ಓದಿಗಾಗಿ ಮಡಿಕೆ, ಮಣ್ಣೆತ್ತುಗಳಿಂದ ಹಣ ಹೊಂದಿಸಿಕೊಳ್ಳುತ್ತಿದ್ದಾನೆ.