ನಗರದ ಮಹಾತ್ಮಗಾಂಧಿ ವೃತ್ತದಿಂದ ಪಟೇಲ್ ನಗರದ ವೆಂಕಟೇಶ್ವರ ಕಲ್ಯಾಣಮಂಟಪದವರೆಗೆ ಸಿದ್ಧರಾಮೇಶ್ವರರ ಚಿತ್ರದ ಮೆರವಣಿಗೆ ನಡೆಯಿತು. ಕೋಲಾಟ ಗಮನ ಸೆಳೆಯಿತು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎಚ್. ದೊಡ್ಡರಾಮಣ್ಣ, ಮಾಜಿ ಶಾಸಕರಾದ ಎಚ್.ಆರ್. ಗವಿಯಪ್ಪ, ಸೈಯ್ಯದ್ ಮಹಮ್ಮದ್, ಮಹಮ್ಮದ್ ಇಮಾಮ್ ನಿಯಾಜಿ, ಸಿದ್ದನಗೌಡ, ಡಿ. ವೆಂಕಟರಮಣ ಪಾಲ್ಗೊಂಡಿದ್ದರು.