ಹೂವಿನಹಡಗಲಿ: ಇಲ್ಲಿನ ಸಿಂಚನ ಪ್ರಕಾಶನದಿಂದ ನೀಡಲಾಗುವ ಕಾವ್ಯ ಪುರಸ್ಕಾರಕ್ಕೆ ಕೃತಿಗಳನ್ನು ಆಹ್ವಾನಿಸಲಾಗಿದೆ.
2021 ಹಾಗೂ 2022ರಲ್ಲಿ ಪ್ರಕಟಗೊಂಡ ಕಾವ್ಯ ಕೃತಿಗಳನ್ನು ಪುರಸ್ಕಾರಕ್ಕೆ ಪರಿಗಣಿಸಲಾಗುತ್ತದೆ. ಪುರಸ್ಕಾರವು ₹5ಸಾವಿರ ನಗದು, ಸ್ಮರಣಿಕೆ ಒಳಗೊಂಡಿರುತ್ತದೆ. ಆಸಕ್ತರು ತಮ್ಮ ಮೂರು ಕಾವ್ಯ ಕೃತಿಗಳನ್ನು ಕಳುಹಿಸಬೇಕು.
ವಿಳಾಸ: ಸುರೇಶ ಅಂಗಡಿ, ಸಿಂಚನ ಪ್ರಕಾಶನ, ಮುಖ್ಯ ಶಿಕ್ಷಕರು, ತುಂಗಭದ್ರಾ ಪ್ರೌಢಶಾಲೆ, ಹೂವಿನ ಹಡಗಲಿ-583 219, ವಿಜಯನಗರ ಜಿಲ್ಲೆ,
ಕೃತಿ ಕಳುಹಿಸಲು ಜುಲೈ 31 ಕೊನೆಯ ದಿನ ಎಂದು ಪ್ರಕಾಶನದ ಸವಿತಾ ಅಂಗಡಿ ಪ್ರಕಟಣೆಯಲ್ಲಿ ಕೋರಿದ್ದಾರೆ.