<p><strong>ಹೊಸಪೇಟೆ: </strong>ಯುವಧ್ವನಿ ಯುವಜನರ ಒಕ್ಕೂಟದಿಂದ ಹಮ್ಮಿಕೊಂಡಿರುವ ‘ಕಸ ಮುಕ್ತ ಸಮಾಜದೆಡೆಗೆ ನಮ್ಮ ನಡೆ’ ಕಾರ್ಯಕ್ರಮಕ್ಕೆ ಶನಿವಾರ ಚಿತ್ತವಾಡ್ಗಿಯಲ್ಲಿ ಚಾಲನೆ ನೀಡಲಾಯಿತು.</p>.<p>ಅಸ್ವಚ್ಛತೆಯಿಂದ ನಗರ ಹಾಗೂ ತಾಲ್ಲೂಕಿನ ಸುತ್ತಮುತ್ತಲ ಹಳ್ಳಿಗಳಲ್ಲಿ ಜನರ ಆರೋಗ್ಯದ ಮೇಲಾಗುತ್ತಿರುವ ಪರಿಣಾಮದ ಕುರಿತು ಬೀದಿನಾಟಕದ ಮೂಲಕ ಜಾಗೃತಿ ಮೂಡಿಸಿದರು. ಪರಿಸರದ ಹಾಡುಗಳನ್ನು ಹಾಡಿದರು. ಸ್ಥಳೀಯರು ನಾಟಕ ನೋಡಿ, ಹಾಡು ಆಲಿಸಿ, ಚಪ್ಪಾಳೆ ಹೊಡೆದು ಪ್ರಶಂಸೆ ವ್ಯಕ್ತಪಡಿಸಿದರು.</p>.<p>ಬಳಿಕ ಮಾತನಾಡಿದ ‘ಯುವಧ್ವನಿ’ ತಂಡದ ಶಿವು, ‘ಕಸದಿಂದ ಜನರ ಆರೋಗ್ಯದ ಮೇಲೆ ಏನೆಲ್ಲ ಅಡ್ಡಪರಿಣಾಮಗಳು ಆಗುತ್ತಿವೆ ಎನ್ನುವುದನ್ನು ನ್ಯಾವ್ಯಾರೂ ಯೋಚನೆ ಮಾಡುತ್ತಿಲ್ಲ. ಅದರ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕು. ನಾವು ಉಸಿರಾಡುವ ಗಾಳಿ ವಿಷವಾಗದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.</p>.<p>ಅಭಿಯಾನದಲ್ಲಿ ಚಿತ್ತವಾಡ್ಗಿ ವಿನೋಬಾ ಭಾವೆ ಶಾಲಯ ಮಕ್ಕಳು ಪಾಲ್ಗೊಂಡಿದ್ದರು. ಒಕ್ಕೂಟದ ಸುನೀತಾ, ನಸ್ರೀನ್ ಚಿತ್ತವಾಡ್ಗಿ, ಪದ್ಮಾ, ಲಕ್ಷ್ಮಿ, ಉದಯ್, ಸುನಿಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ: </strong>ಯುವಧ್ವನಿ ಯುವಜನರ ಒಕ್ಕೂಟದಿಂದ ಹಮ್ಮಿಕೊಂಡಿರುವ ‘ಕಸ ಮುಕ್ತ ಸಮಾಜದೆಡೆಗೆ ನಮ್ಮ ನಡೆ’ ಕಾರ್ಯಕ್ರಮಕ್ಕೆ ಶನಿವಾರ ಚಿತ್ತವಾಡ್ಗಿಯಲ್ಲಿ ಚಾಲನೆ ನೀಡಲಾಯಿತು.</p>.<p>ಅಸ್ವಚ್ಛತೆಯಿಂದ ನಗರ ಹಾಗೂ ತಾಲ್ಲೂಕಿನ ಸುತ್ತಮುತ್ತಲ ಹಳ್ಳಿಗಳಲ್ಲಿ ಜನರ ಆರೋಗ್ಯದ ಮೇಲಾಗುತ್ತಿರುವ ಪರಿಣಾಮದ ಕುರಿತು ಬೀದಿನಾಟಕದ ಮೂಲಕ ಜಾಗೃತಿ ಮೂಡಿಸಿದರು. ಪರಿಸರದ ಹಾಡುಗಳನ್ನು ಹಾಡಿದರು. ಸ್ಥಳೀಯರು ನಾಟಕ ನೋಡಿ, ಹಾಡು ಆಲಿಸಿ, ಚಪ್ಪಾಳೆ ಹೊಡೆದು ಪ್ರಶಂಸೆ ವ್ಯಕ್ತಪಡಿಸಿದರು.</p>.<p>ಬಳಿಕ ಮಾತನಾಡಿದ ‘ಯುವಧ್ವನಿ’ ತಂಡದ ಶಿವು, ‘ಕಸದಿಂದ ಜನರ ಆರೋಗ್ಯದ ಮೇಲೆ ಏನೆಲ್ಲ ಅಡ್ಡಪರಿಣಾಮಗಳು ಆಗುತ್ತಿವೆ ಎನ್ನುವುದನ್ನು ನ್ಯಾವ್ಯಾರೂ ಯೋಚನೆ ಮಾಡುತ್ತಿಲ್ಲ. ಅದರ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕು. ನಾವು ಉಸಿರಾಡುವ ಗಾಳಿ ವಿಷವಾಗದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.</p>.<p>ಅಭಿಯಾನದಲ್ಲಿ ಚಿತ್ತವಾಡ್ಗಿ ವಿನೋಬಾ ಭಾವೆ ಶಾಲಯ ಮಕ್ಕಳು ಪಾಲ್ಗೊಂಡಿದ್ದರು. ಒಕ್ಕೂಟದ ಸುನೀತಾ, ನಸ್ರೀನ್ ಚಿತ್ತವಾಡ್ಗಿ, ಪದ್ಮಾ, ಲಕ್ಷ್ಮಿ, ಉದಯ್, ಸುನಿಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>