‘ಬ್ಯಾಟರಿಚಾಲಿತ ವಾಹನಗಳು ಸಾಲುತ್ತಿಲ್ಲ ಎಂದು ಮ್ಯಾಕ್ಸಿಕ್ಯಾಬ್ ಓಡಿಸುವುದು ಸರಿಯೇ? ವಾಹನಗಳು ಉಗುಳುವ ಹೊಗೆಯಿಂದ ಸಂರಕ್ಷಿತ ಸ್ಮಾರಕ ಹಾಳಾಗಬಾರದು ಎಂಬ ಉದ್ದೇಶದಿಂದ ಎಲ್ಲ ರೀತಿಯ ವಾಹನಗಳ ಮೇಲೆ ನಿರ್ಬಂಧ ಹೇರಲಾಗಿದೆ. ಈಗ ಸ್ವತಃ ಪ್ರಾಧಿಕಾರವೇ ಆ ನಿಯಮ ಮುರಿದರೆ ಹೇಗೆ? ಕೂಡಲೇ ಹಾಳಾಗಿರುವ ವಾಹನಗಳನ್ನು ದುರಸ್ತಿಗೊಳಿಸಿ, ಓಡಿಸಬೇಕು’ ಎಂದು ಸ್ಥಳೀಯರಾದ ರಮೇಶ, ರೋಹಿತ್, ರಾಜು ಆಗ್ರಹಿಸಿದ್ದಾರೆ.