<p><strong>ಕೂಡ್ಲಿಗಿ: </strong>ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಗಾಳಿ ಹಾಗೂ ಆಲಿಕಲ್ಲು ಮಳೆಗೆ 3 ಪ್ರತ್ಯೇಕ ಹಿಂಡುಗಳಲ್ಲಿದ್ದ 80 ಕುರಿಗಳು ಸಾವಿಗೀಡಾದ ಘಟನೆ ರಾಮದುರ್ಗದ ಬಳಿ ಜರುಗಿದೆ. <br /> <br /> ಕುರಿಗಳು ಪ್ರತ್ಯೇಕ ಹಿಂಡುಗಳಲ್ಲಿದ್ದು, ಬುಧವಾರ ರಾತ್ರಿ ಧಿಡೀರನೇ ಆಣಿಕಲ್ಲು ಮಳೆ ಸುರಿದುದೇ ಕುರಿಗಳ ಸಾವಿಗೆ ಕಾರಣವಾಗಿದೆ ಎಂದು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶ್ರೀನಿವಾಸ್ ತಿಳಿಸಿದ್ದಾರೆ.<br /> ಕುದುರೆಡವು ಗೊಲ್ಲರಹಟ್ಟಿಯ ಕರಿನಾಗಪ್ಪ, ದೊಡ್ಡನಾಗಪ್ಪ, ಅಜ್ಜಪ್ಪ, ಓಬಪ್ಪ, ಕರಿಓಬಪ್ಪ, ಕರಿಯಪ್ಪ, ಪೂಜಾರ ನಾಗಪ್ಪ, ಬಡನಾಗಪ್ಪ, ಮುದ್ದಪ್ಪ ಇವರಿಗೆ ಸೇರಿದ 900 ಕುರಿಗಳಲ್ಲಿ 45 ಮೃತಪಟ್ಟಿವೆ.<br /> <br /> ರಾಮದುರ್ಗ ಗೊಲ್ಲರಹಟ್ಟಿಯ ಬಸಪ್ಪ, ಗೋವಪ್ಪ, ಪೂಜಾರಿ ಚಿಕ್ಕಪ್ಪ, ಪೂಜಾರಿ ಪಾಲಪ್ಪ ಅವರಿಗೆ ಸೇರಿದ 15 ಕುರಿಗಳು, ರಾಮದುರ್ಗದ ಪೂಜಾರ ಸೂರಪ್ಪ, ದೊಡ್ಡಚಿತ್ತಪ್ಪ ಇವರ 18 ಕುರಿಗಳು ಸಾವಿಗೀಡಾಗಿವೆ ಎಂದು ತಹಸೀಲ್ದಾರ್ ವೀರಮಲ್ಲಪ್ಪ ಪೂಜಾರ್ ತಿಳಿಸಿದ್ದಾರೆ. <br /> <br /> ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಸರಾಸರಿ 29.5 ಮಿ.ಮೀ.ನಷ್ಟು ಮಳೆಯಾಗಿದೆ. ಕೊಟ್ಟೂರು ಭಾಗದಲ್ಲಿ 28 ಮಿ.ಮೀ, ಕೂಡ್ಲಿಗಿ ಭಾಗದಲ್ಲಿ 23 ಮಿ.ಮೀ, ಹೊಸಹಳ್ಳಿ ಭಾಗದಲ್ಲಿ 10 ಮಿ.ಮೀ, ಗುಡೇಕೋಟೆ ಭಾಗದಲ್ಲಿ 13 ಮಿ.ಮೀನಷ್ಟು ಮಳೆಯಾಗಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಡ್ಲಿಗಿ: </strong>ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಗಾಳಿ ಹಾಗೂ ಆಲಿಕಲ್ಲು ಮಳೆಗೆ 3 ಪ್ರತ್ಯೇಕ ಹಿಂಡುಗಳಲ್ಲಿದ್ದ 80 ಕುರಿಗಳು ಸಾವಿಗೀಡಾದ ಘಟನೆ ರಾಮದುರ್ಗದ ಬಳಿ ಜರುಗಿದೆ. <br /> <br /> ಕುರಿಗಳು ಪ್ರತ್ಯೇಕ ಹಿಂಡುಗಳಲ್ಲಿದ್ದು, ಬುಧವಾರ ರಾತ್ರಿ ಧಿಡೀರನೇ ಆಣಿಕಲ್ಲು ಮಳೆ ಸುರಿದುದೇ ಕುರಿಗಳ ಸಾವಿಗೆ ಕಾರಣವಾಗಿದೆ ಎಂದು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶ್ರೀನಿವಾಸ್ ತಿಳಿಸಿದ್ದಾರೆ.<br /> ಕುದುರೆಡವು ಗೊಲ್ಲರಹಟ್ಟಿಯ ಕರಿನಾಗಪ್ಪ, ದೊಡ್ಡನಾಗಪ್ಪ, ಅಜ್ಜಪ್ಪ, ಓಬಪ್ಪ, ಕರಿಓಬಪ್ಪ, ಕರಿಯಪ್ಪ, ಪೂಜಾರ ನಾಗಪ್ಪ, ಬಡನಾಗಪ್ಪ, ಮುದ್ದಪ್ಪ ಇವರಿಗೆ ಸೇರಿದ 900 ಕುರಿಗಳಲ್ಲಿ 45 ಮೃತಪಟ್ಟಿವೆ.<br /> <br /> ರಾಮದುರ್ಗ ಗೊಲ್ಲರಹಟ್ಟಿಯ ಬಸಪ್ಪ, ಗೋವಪ್ಪ, ಪೂಜಾರಿ ಚಿಕ್ಕಪ್ಪ, ಪೂಜಾರಿ ಪಾಲಪ್ಪ ಅವರಿಗೆ ಸೇರಿದ 15 ಕುರಿಗಳು, ರಾಮದುರ್ಗದ ಪೂಜಾರ ಸೂರಪ್ಪ, ದೊಡ್ಡಚಿತ್ತಪ್ಪ ಇವರ 18 ಕುರಿಗಳು ಸಾವಿಗೀಡಾಗಿವೆ ಎಂದು ತಹಸೀಲ್ದಾರ್ ವೀರಮಲ್ಲಪ್ಪ ಪೂಜಾರ್ ತಿಳಿಸಿದ್ದಾರೆ. <br /> <br /> ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಸರಾಸರಿ 29.5 ಮಿ.ಮೀ.ನಷ್ಟು ಮಳೆಯಾಗಿದೆ. ಕೊಟ್ಟೂರು ಭಾಗದಲ್ಲಿ 28 ಮಿ.ಮೀ, ಕೂಡ್ಲಿಗಿ ಭಾಗದಲ್ಲಿ 23 ಮಿ.ಮೀ, ಹೊಸಹಳ್ಳಿ ಭಾಗದಲ್ಲಿ 10 ಮಿ.ಮೀ, ಗುಡೇಕೋಟೆ ಭಾಗದಲ್ಲಿ 13 ಮಿ.ಮೀನಷ್ಟು ಮಳೆಯಾಗಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>