ಕೂಡ್ಲಿಗಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ಹಾಗೂ ಕಂಟೇನರ್ ಲಾರಿ ಮಧ್ಯ ನಡೆದ ಮುಖಾ ಮುಖು ಡಿಕ್ಕಿಯಲ್ಲಿ 34ಜನ ಗಾಯಗೊಂಡ ಘಟನೆ ತಾಲ್ಲೂಕಿ ಹುಲಿಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬುಧವಾರ ಜರುಗಿದೆ.
ಹೊಸಪೇಟೆ ಘಟಕದ ಹೊಸಪೇಟೆ- ಮಂಡ್ಯ ಮಾರ್ಗದ ಈ ಬಸ್ ಚಿತ್ರದುರ್ಗದ ಕಡೆ ಹೋಗಲು ಹುಲಿಕೆರೆ ಬಳಿ ಬಂದಾಗ ಚಿತ್ರದುರ್ಗದಿಂದ ಬರುತ್ತಿದ್ದ ಕಂಟೇನರ್ ಲಾರಿ ಚಾಲಕ ಅತಿ ವೇಗ ಮತ್ತು ಅಜಾಗರುಕತೆಯಿಂದ ಲಾರಿಯನ್ನು ಚಾಲನೆ ಮಾಡಿಕೊಂಡು ಬಂದು ಬಸ್ಸಿಗೆ ಡಿಕ್ಕಿ ಹೊಡೆದ್ದಾನೆ.
ಇದರಿಂದ ಲಾರಿ ಹಾಗೂ ಬಸ್ ಚಾಲಕ ಸೇರಿ 34 ಜನ ಗಾಯಗೊಂಡಿದ್ದಾರೆ. ವಿಷಯ ತಿಳಿದ ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯದಲ್ಲಿ ತೊಡಗಿ ಗಾಯಳುಗಳನ್ನು ಚಿತ್ರದುರ್ಗ ಹಾಗೂ ಜಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.