ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆ ಸಂಪರ್ಕ ರಸ್ತೆ ಸಮಸ್ಯೆಗೆ ಪರಿಹಾರ

Last Updated 25 ಏಪ್ರಿಲ್ 2017, 6:19 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನ ಹರವಿ ಸೇತುವೆ ಹಾಗೂ ಸಂಪರ್ಕ ರಸ್ತೆ ನಿರ್ಮಿಸಲು ಅಗತ್ಯವಿರುವ ಜಮೀನನ್ನು ರೈತರ ಮನವೋಲಿಸಿ ನೇರ ಖರೀದಿಗೆ ಒಪ್ಪಿಸುವಲ್ಲಿ ಜಿಲ್ಲಾಧಿಕಾರಿ ಡಾ. ರಾಮಪ್ರಸಾದ್ ಯಶಸ್ವಿಯಾದರು.ತಾಲ್ಲೂಕಿನ ಹರವಿ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮ­ಸಭೆ­ಯಲ್ಲಿ ಭೂಮಿ ಕಳೆದು­ಕೊಳ್ಳುವ ಸಂತ್ರಸ್ತ ರೈತರ ಅಹವಾಲು ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿ, ‘ರೈತರು ನೇರ ಖರೀದಿಗೆ ಒಪ್ಪುವುದಾದರೆ ತಮ್ಮ ಪರಿಮಿತಿಯಲ್ಲಿ ಗರಿಷ್ಠ ಭೂ ಪರಿಹಾರ ಹಾಗೂ ಮಾನವೀಯತೆ ದೃಷ್ಟಿಯಿಂದ ಪುನರ್ವಸತಿಗೆ ನೆರವು ಕಲ್ಪಿಸಲಾ­ಗುವುದು.

ಒಪ್ಪಿಗೆ ನೀಡದಿದ್ದರೆ ಕಾನೂ­ನಾತ್ಮಕ ಕ್ರಮಗಳಿಂದ ಭೂಸ್ವಾಧೀನ­ಪಡಿಸಿಕೊಳ್ಳುವುದು ಅನಿವಾರ್ಯ­ ವಾ­ಗುತ್ತದೆ’ ಎಂದು ಹೇಳಿದಾಗ ರೈತರು ನೇರ ಖರೀದಿ ಪ್ರಕ್ರಿಯೆಗೆ ಸಮ್ಮತಿಸಿದರು.ಸಂಪರ್ಕ ರಸ್ತೆಗಾಗಿ 10 ಎಕರೆ ಖಾಸಗಿ ಜಮೀನು, 11 ಎಕರೆ ಸರ್ಕಾರಿ ಜಮೀನು ವಶಕ್ಕೆ ಪಡೆಯಲಾಗುತ್ತದೆ. ಇಲ್ಲಿನ ಮಾರುಕಟ್ಟೆ ಮೌಲ್ಯ ₹2.22 ಲಕ್ಷ ಇದ್ದರೂ ಭೂಮಿ ಕಳೆದುಕೊಳ್ಳುವ ರೈತರಿಗೆ ಅನುಕೂಲ ಕಲ್ಪಿಸಲು ಉದ್ದೇ­ಶದಿಂದ ಎಕರೆಗೆ ₹10ಲಕ್ಷ  ಭೂ ಪರಿಹಾರ ನಿಗದಿಪಡಿಸಲಾಗಿದೆ. ಒಪ್ಪಿಗೆ ಕರಾರು ಮಾಡಿಕೊಂಡ ವಾರದೊಳಗೆ ಪರಿಹಾರ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಕೃಷಿ ಜಮೀನಿಗೆ ಎಕರೆವಾರು ಪರಿಹಾರದ ಜತೆಗೆ ಜಮೀನಿನಲ್ಲಿರುವ ಗಿಡಮರ, ಕೊಳವೆಬಾವಿ, ಆಸ್ತಿಪಾಸ್ತಿ­ಗಳಿಗೆ ನಿಯಮಾನುಸಾರ ಪ್ರತ್ಯೇಕ ಪರಿ­ಹಾರ ನೀಡಲಾಗುತ್ತದೆ ಎಂದರು.ಗ್ರಾಮ ಪರಿಮಿತಿಯ 62 ಮನೆಗಳು, 102 ನಿವೇಶನಗಳನ್ನು ವಶ ಪಡಿಸಿ­ಕೊಳ್ಳಲಾಗುತ್ತದೆ. ಈ ಪೈಕಿ ದಾಖಲಾತಿ ಇರುವ 52 ಪಕ್ಕಾ ಮನೆಗಳಿಗೆ ಪರಿಹಾರ ನೀಡಿ, ಬೇರೆಡೆ ನಿವೇಶನ ನೀಡಲಾ­ಗುತ್ತದೆ. 10 ದನದ ಕೊಟ್ಟಿಗೆಗಳಿಗೆ ಸಂಚಿತ ಮೌಲ್ಯ ಆಧರಿಸಿ ಪರಿಹಾರ ವಿತರಿಸಲಾಗುವುದು. ಮನೆ ಕಳೆದುಕೊಳ್ಳುವ ಸಂತ್ರಸ್ತರಿಗಾಗಿ ವಸತಿ ವಿನ್ಯಾಸ ಅಭಿವೃದ್ಧಿಪಡಿಸಿನಿವೇಶನ ಹಂಚ­ಲಾಗುವುದು  ಎಂದರು.

ಸಂತ್ರಸ್ತರಾದ ಪ್ರಭು ರಾಘ­ವೇಂದ್ರ, ಚಿದಾನಂದ, ವಿಜಯ­ಕುಮಾರ್, ಸಾರ್ವ­­ಜನಿಕ ಉದ್ದೇಶಕ್ಕೆ ಮನೆ, ಜಮೀನು ಕಳೆದುಕೊಳ್ಳುವ ರೈತರಿಗೆ ಮಾನವೀಯತೆ ದೃಷ್ಟಿಯಿಂದ ಗರಿಷ್ಠ ಪರಿಹಾರ ನೀಡುವಂತೆ ಮನವಿ ಮಾಡಿ­ದರು. ಧಾರವಾಡ ವಿಶೇಷ ಭೂ ಸ್ವಾಧೀ­ನಾಧಿಕಾರಿ ಸಿದ್ದಪ್ಪ, ರಾಷ್ಟ್ರೀಯ ಹೆದ್ದಾರಿ ಚಿತ್ರದುರ್ಗ ವಿಭಾಗದ ಕಾರ್ಯ­ನಿರ್ವಾಹಕ ಎಂಜಿನಿಯರ್ ರವಿಶಂಕರ್, ತಹಶೀಲ್ದಾರ್ ರಾಘವೇಂದ್ರ ರಾವ್ ಉಪಸ್ಥಿತರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT