ಮೂಲತಃ ಅದ್ದೆ ವಿಶ್ವನಾಥಪುರ ಗ್ರಾಮದರಾದ ಚಿಕ್ಕತಿಮ್ಮರೆಡ್ಡಿ, ಗ್ರಾಮದ ಸರ್ವೆ ನಂಬರ್ 226ರ ಗುಂಡುತೋಪು, 63ರಲ್ಲಿ ಇರುವ ಕುಳ್ಳಗುಟ್ಟಿ, 93ರಲ್ಲಿರುವ ಸರ್ಕಾರಿ ಬಿಳಿನೀರಿನ ಕುಂಟೆ, ಕೆರೆಯಂಗಳ ಮತ್ತು ಕಾಕೋಳು ಗ್ರಾಮದ ಕಡೆ ಹೋಗುವ ಮುಖ್ಯರಸ್ತೆಗಳ ಬದಿಯಲ್ಲಿ ಹಲಸು, ಮಾವು ಮತ್ತು ನೇರಳೆ ಮರಗಳನ್ನು ಬೆಳೆಸಿದ್ದಾರೆ. ಶ್ರೀರಾಮನಹಳ್ಳಿ, ಅದಿಗಾನಹಳ್ಳಿ ಪಟಾಲಮ್ಮ ದೇವಸ್ಥಾನ ಹಾಗೂ ರಾಜಾನುಕುಂಟೆ ಸರ್ಕಾರಿ ಅಸ್ಪತ್ರೆಯ ಆವರಣದಲ್ಲಿ ನೂರಾರು ಮರಗಳನ್ನು 20 ವರ್ಷಗಳಿಂದ ಪೋಷಿಸಿದ್ದಾರೆ. ಫಲ ನೀಡುತ್ತಿರುವ ಈ ಮರಗಳು ವಿವಿಧ ಜೀವಸಂಕುಲಗಳಿಗೂ ಆಸರೆಯಾಗಿವೆ.