‘ಅಂಬೇಡ್ಕರ್ ಅವರು ಸ್ತ್ರೀವಾದಿಯಾಗಿಯೂ ತಮ್ಮ ಹೋರಾಟ ಮುಂದುವರಿಸಿದ್ದರು. ಹೆರಿಗೆ ಭತ್ಯೆ, ಹೆರಿಗೆ ರಜೆ, ವಿಧವಾ ವಿವಾಹ, ಆಸ್ತಿ ಹಕ್ಕು ಇರಬೇಕೆಂದು ಮಹಿಳೆಯರ ಪರವಾಗಿ ಹಕ್ಕೊತ್ತಾಯ ಮಂಡಿಸಿದರು. ಅಲ್ಲದೇ, ಮಾನವೀಯ ಮೌಲ್ಯಗಳ ಆಧಾರದಲ್ಲಿ ಸಂವಿಧಾನಾತ್ಮಕ ಚೌಕಟ್ಟು ನಿರ್ಮಿಸಿದರು. ಆದರೂ, ಆ ಚೌಕಟ್ಟಿನ ಅಳವಡಿಕೆ ಸಾಧ್ಯವಾಗಲಿಲ್ಲ. ಜತೆಗೆ ಸಂಸತ್ತಿನಲ್ಲೂ ಅಂಗೀಕಾರವಾಗಲಿಲ್ಲ’ ಎಂದು ವಿಷಾದಿಸಿದರು.