‘ಶಾಲೆಯಲ್ಲಿನ ವಿದ್ಯಾರ್ಥಿಗಳು ಕಳೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 85 ರಷ್ಟು ಫಲಿತಾಂಶ ಪಡೆದು, ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಕಲಿಕೆಗೆ ಪೂರಕ ವಾತಾವರಣ ಇಲ್ಲಿದೆ. ಉತ್ತಮ ಸಿಬ್ಬಂದಿ ವರ್ಗ ಇದ್ದಾರೆ. ಈಗ ಕಂಪ್ಯೂಟರ್ ಕಲಿಕಾ ಕೇಂದ್ರವನ್ನೂಪ್ರಾರಂಭಿಸಿದ್ದೇವೆ. ಆಟೋ ಬೆಲ್ ಕೊಠಡಿಯನ್ನೂ ಮಾಡಲಾಗಿದ್ದು, ಇವರೆಡೂ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ನೆರವಾಗಲಿವೆ. ಇದಕ್ಕೆ ಪೂರಕ ಕೊಠಡಿಗಳ ಅಗತ್ಯವಿದೆ. ಕಂಪ್ಯೂಟರ್ ಕೊಠಡಿಯನ್ನು ಹವಾನಿಯಂತ್ರಿತ ಕೊಠಡಿಯನ್ನಾಗಿ ಮಾರ್ಪಡಿಸಬೇಕಿದ್ದು, ಇಲಾಖೆಯಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿದರು.